ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ. ನಾಗಪ್ಪ ಗೌಡ ಆರ್.ರವರ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿಯ ಹೇಮಾವತಿ ಅವರು ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಹೆಚ್ಡಿ ಪದವಿ ನೀಡಿ ಗೌರವಿಸಿದೆ.
’ಪ್ರಭಾಕರ ನೀರ್ಮಾರ್ಗ ಅವರ ಕಾದಂಬರಿಗಳಲ್ಲಿ ಪ್ರಾದೇಶಿಕ ಸಂಸ್ಕೃತಿಯ ಪ್ರತಿನಿಧಿಕರಣ’ ಎಂಬ ವಿಷಯದ ಮೇಲೆ ಹೇಮಾವತಿ ಅವರು ಪ್ರೌಢ ಸಂಶೋಧನೆ ನಡೆಸಿದ್ದರು. ಅವರ ಈ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿ.ಹೆಚ್.ಡಿ ಪದವಿ ನೀಡಿ ಗೌರವಿಸಿದೆ. ಕೊಣಾಜೆ ಗ್ರಾಮದ ದಿ. ಅಣ್ಣಪ್ಪ ಮೂಲ್ಯ ಮತ್ತು ಸೇಸಮ್ಮ ದಂಪತಿಯ ಪುತ್ರಿಯಾಗಿರುವ ಹೇಮಾವತಿ ಅವರು ಉಪ್ಪಿನಂಗಡಿ ನಿವಾಸಿ, ಮಾಜಿ ಸೈನಿಕ ಹಾಗೂ ಬ್ಯಾಂಕ್ ಉದ್ಯೋಗಿ ಕೆ. ವಾಮನ ಅವರ ಪತ್ನಿ.