ವಿಟ್ಲ: ಬಂಟ್ವಾಳ ತಾಲೂಕಿನ ಇಡ್ಕಿದು ಮತ್ತು ಕುಳ ಗ್ರಾಮದ ನವೋದಯ ಸದಸ್ಯರಿಗೆ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಇದರ ವತಿಯಿಂದ ನೀಡಲಾದ ಸಮವಸ್ತ್ರವನ್ನು ಏ.8ರಂದು ಇಡ್ಕಿದು ಸೇವಾ ಸಹಕಾರಿ ಸಂಘದ ಕೇಂದ್ರ ಕಛೇರಿ ಉರಿಮಜಲಿನಲ್ಲಿ ಸಂಘದ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಬೀಡಿನ ಮಜಲುರವರು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ರಾಮಭಟ್ ನೀರಪಳಿಕೆ, ನಿರ್ದೇಶಕರಾದ ನಿರ್ದೇಶಕರಾದ ಚಂದ್ರಹಾಸ ಕೆಂರ್ದೇಲು, ಜಯಂತ ಕಂಪ, ನವೀನ್ ಕೆ. ಪಿ. ಪಾಂಡೇಲು, ಉಮೇಶ್ ವಡ್ಯರ್ಪೆ, ಆನಂದ ಕೆ. ಅಡ್ಯಾಲು,ಸತೀಶ್ ಅಳಿಕೆಮಜಲು, ಲೋಹಿತಾಶ್ವ ಎಂ. ಮುಂಡ್ರಬೈಲು, ಹೃಷಿಕೇಶ್ ಕೆ. ಎನ್. ಮುಕ್ಕುಡ, ವಿದ್ಯಾ ವಿ. ಮುದಳೆಗುಂಡಿ, ಪದ್ಮಾವತಿ ಕೂವೆತ್ತಿಲ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ ನಾಯ್ಕ, ವಲಯ ಪ್ರೇರಕಿಯಾದ ಯಶೋಧ ಮೊದಲಾದವರು ಉಪಸ್ಥಿತರಿದ್ದರು.