ವೀರಮಂಗಲ ಕುಮಾರಾಧಾರ ಹೊಳೆಯಲ್ಲಿ ಅವಭೃತ ಸ್ನಾನದಲ್ಲಿ ಪಾಲ್ಗೊಂಡ ಭಕ್ತ ಸಾಗರ

ಪುತ್ತೂರು: ಎ.10 ರಂದು ಧ್ವಜಾರೋಹಣದೊಂದಿಗೆ ಆರಂಭಗೊಂಡ ಇತಿಹಾಸ ಪ್ರಸಿದ್ಧ ಪುತ್ತೂರಿನ ಸೀಮಾಧಿಪತಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಎ.17ರಂದು ಬ್ರಹ್ಮರಥೋತ್ಸವ ಬಳಿಕ ಎ.18ರಂದು ಶ್ರೀ ದೇವರ ಅವಭೃತ ಸವಾರಿ ಪೂರ್ಣಗೊಂಡು ಎ.19ರ ಬೆಳಗ್ಗಿನ ಜಾವ ಕುಮಾರಧಾರ ಹೊಳೆಯಲ್ಲಿ ಅವಭೃತ ಸ್ನಾನ ಸಂಪನ್ನಗೊಂಡಿತ್ತು.

ಕುಂಭಮೇಳದ ಮಾದರಿಯಲ್ಲಿ ಭಕ್ತರು ಶ್ರೀ ದೇವರ ಜೊತೆ ಅವಭೃತ ಸ್ನಾನದಲ್ಲಿ ಪಾಲ್ಗೊಂಡು ಪುಣೀತರಾದರು.
