ಪುತ್ತೂರು: ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಿರುವ ಉದ್ಯಮಿ, ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ಹಾಗೂ ಅವರ ಮಾವ ಮಹಮ್ಮದ್ ಅವರಿಗೆ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮ ಹರ್ಲ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ಹರ್ಲಡ್ಕ ನೇತೃತ್ವದಲ್ಲಿ ಕುಂಬ್ರದಲ್ಲಿ ನಡೆಯಿತು.
ಸುಳ್ಯ ಪ್ರಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಪತ್ರಕರ್ತ ಯೂಸುಫ್ ರೆಂಜಲಾಡಿ, ಬಿ.ಕೆ ರಶೀದ್, ಅನಿವಾಸಿ ಉದ್ಯಮಿ ರಝಾಕ್ ಜಟ್ಟಿಪಳ್ಳ, ಕೆ.ಎಂ ಮೂಸ ಮತ್ತಿತರರು ಉಪಸ್ಥಿತರಿದ್ದರು.