
ಗಣಹೋಮ, ಸತ್ಯನಾರಾಯಣ ಪೂಜೆ, ಕುಣಿತ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಚಿಂತನ-ಮಂಥನ
ಪುತ್ತೂರು: ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು ಹಾಗೂ ಸುಳ್ಯ, ಬಂಟ್ವಾಳ, ಮಂಗಳೂರು ತಾಲೂಕು ಸಮಿತಿಗಳ ಸಹಯೋಗದಲ್ಲಿ ಪುತ್ತೂರು ತಾಲೂಕು ಸಮಿತಿ ಆಶ್ರಯದಲ್ಲಿ ಎ.20ರಂದು ಆರ್ಲಪದವು ರಣಮಂಗಲ ಸಭಾಭವನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ವಿಚಾರ ಸಂಕಿರಣಗಳೊಂದಿಗೆ ನಡೆದ ಜಿಲ್ಲಾ ಯಾದವ ಸಮ್ಮೇಳನ-2025 ಸಡಗರ ಸಂಭ್ರಮದೊಂದಿಗೆ ಮೇಳೈಸಿದೆ.
ಕಾರ್ಯಕ್ರಮದ ಪ್ರಾರಂಭದಲ್ಲಿ ಬೆಳಿಗ್ಗೆ ಅರ್ಚಕ ಬಾಲಕೃಷ್ಣ ಭಟ್ ಕಕ್ಕೂರುರವರ ನೇತೃತ್ವದಲ್ಲಿ ಗಣಹೋಮ, ಸತ್ಯ ನಾರಾಯಣ ಪೂಜೆ ನೆರವೇರಿತು. ನಂತರ ಯಾದವ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷ ನಾರಾಯಣ ಪಿ. ಕಾರ್ಯಕ್ರಮದ ವೇದಿಕೆಯನ್ನು ಉದ್ಘಾಟಿಸಿದರು. ಬಳಿಕ ಆಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಪಾಂಚಜನ್ಯ ಕುಣಿತ ಭಜನಾ ಸಂಘದ ವಿದ್ಯಾರ್ಥಿಗಳಿಂದ ಕುಣಿತ ಭಜನೆ, ಸಭಾ ಕಾರ್ಯಕ್ರಮ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರಗೋಷ್ಠಿಗಳು ನಡೆಯಿತು. ವಿವಿಧ ಸಮುದಾಯಗಳ ಮುಖಂಡರು, ಜನಪ್ರತಿನಿಽಗಳು, ಶೈಕ್ಷಣಿಕ, ಸಾಮಾಜಿಕ ಸಂಘ ಸಂಸ್ಥೆಗಳ ಮುಖಂಡರುಗಳು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಜಿಲ್ಲೆ ವಿವಿಧ ತಾಲೂಕುಗಳಿಂದ ಆಗಮಿಸಿದ ಯಾದವ ಸಭಾದ ಸಮಾಜ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮಾಗಮವೇ ನಡೆದಿತ್ತು.
ಗೊಲ್ಲ, ಯಾದವ ಸಮಾಜವನ್ನು ಪ್ರವರ್ಗ 1ರಲ್ಲಿಯೇ ಸೇರಿಸಲು ರಾಜ್ಯಮಟ್ಟದಲ್ಲಿ ಹೋರಾಟ-ಧೀರಜ್ ಮುನಿರಾಜ್: ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ದೊಡ್ಡಬಳ್ಳಾಪುರ ಶಾಸಕ ಽರಜ್ ಮುನಿರಾಜ್ ಮಾತನಾಡಿ, ಜಾತಿ ಗಣತಿಯಲ್ಲಿ ಅಹಿಂದದಲ್ಲಿ ಅಲ್ಪ ಸಂಖ್ಯಾತ ಮಾತ್ರ ಮುಂದೆಯಿಟ್ಟು ಹಿಂದುಳಿದವರು, ದಲಿತರನ್ನು ಹಿಂದೆ ತಲ್ಲುವ ಕೆಲಸ ಸರಕಾರಿಂದ ಆಗಿದೆ. ಜಾತಿ ಗಣತಿ ಅವೈಜ್ಞಾನಿಕವಾಗಿದೆ ಎಂದು ಬಹಳಷ್ಟು ಸಮುದಾಯದವರು ಹೋರಾಟ ಮಾಡಿದ್ದಾರೆ. ಸಣ್ಣ ಸಮುದಾಯವಾಗಿರುವ ಗೊಲ್ಲ ಹಾಗೂ ಯಾದವ ಒಂದೇ ಸಮುದಾಯವಾಗಿದ್ದರೂ ಗೊಲ್ಲ ಸಮಾಜವನ್ನು ಪ್ರವರ್ಗ 1 ಎ ಹಾಗೂ ಯಾದವ ಸಮಾಜವನ್ನು ಪ್ರವರ್ಗ 1 ಬಿ ಎಂದು ವಿಂಗಡಿಸಿ ಒಂದೇ ಸಮುದಾದಯವನ್ನು ಒಡೆದು ಆಳುವ ಕೆಲಸ ಜಾತಿ ಗಣತಿಯಿಂದ ಆಗಿದೆ. ಅಲೆಮಾರಿ ಸಮುದಾಯವಾಗಿರುವ ನಮಗೆ ಪ್ರವರ್ಗ 1ರಲ್ಲಿಯೇ ಸೇರಿಸಿ ಸೂಕ್ತ ಸ್ಥಾನಮಾನ ನೀಡಬೇಕು. ಇದಕ್ಕಾಗಿ ರಾಜ್ಯಮಟ್ಟದಲ್ಲಿ ಹೋರಾಟ ಮಾಡಲಾಗುವುದು. ದ.ಕ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಶಾಸಕರೊಂದಿಗೆ ಸಮುದಾಯದ ಹಕ್ಕೋತ್ತಾಯವನ್ನು ಅಽವೇಶನದಲ್ಲಿ ಮಂಡಿಸಿ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯುತ್ನಮಾಡಲಾಗವುದು ಎಂದ ಹೇಳಿದ ಅವರು ಸಂಘಟನೆಗೆ ದ.ಕ ಜಿಲ್ಲೆ ಸ್ಪೂರ್ತಿಯಾಗಿದೆ. ಈ ಸಮ್ಮೇಳನ ರಾಜ್ಯ ಮಟ್ಟದಲ್ಲಿ ಹೊಸ ದಿಕ್ಸೂಚಿ ನೀಡಲಿ ಎಂದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಶ್ರೀಕೃಷ್ಣ ಜಯಂತಿಯನ್ನು ಎಲ್ಲಾ ಕಡೆ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಎಲ್ಲಾ ಜಯಂತಿಗಳಿಗೂ ರಜೆಯಿರುವಂತೆ ಶ್ರೀ ಕೃಷ್ಣ ಜಯಂತಿಗೂ ಸರಕಾರಿ ರಜೆಯನ್ನು ಕಡ್ಡಾಯ ಮಾಡಬೇಕು. ಇದಕ್ಕಾಗಿ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು. ಎಲ್ಲಾ ತಾಲೂಕಿನಲ್ಲಿ ಸಮುದಾಯ ಭವನ ನಿರ್ಮಾಣದ ನಿವೇಶನಕ್ಕಾಗಿ ಸರಕಾರಿ ಜಾಗ ಗುರುತಿಸಿ ಅರ್ಜಿ ಹಾಕಬೇಕು. ಜಾಗ ಮಂಜೂರಾತಿಗೆ ಬೇಕಾದ ಎಲ್ಲಾ ಸಹಕಾರ ನೀಡಲಾಗುವುದು. ವಿದ್ಯಾರ್ಥಿ ನಿಲಯಗಳಲ್ಲಿ ಸಮುದಾಯಕ್ಕೆ ಹೆಚ್ಚುವರಿ ಸೀಟ್ ನೀಡಲು ಪ್ರಸ್ತಾವಣೆ ಸಲ್ಲಿಸಲಾಗುವುದು. ಜೊತೆಗೆ ಯಾದವ ಸಮುದಾಯಕ್ಕೆ ಹೆಚ್ಚು ಮನೆ, ಬೋರ್ವೆಲ್, ಸ್ವ ಉದ್ಯೋಗ ನೀಡುವ ಪಟ್ಟಿಗೆ ಸೇರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಚಿಕ್ಕ ಸಮುದಾಯ ನಿಷ್ಠೆ, ನಂಬಿಕೆಗೆ ಅರ್ಹವಾದ ಸಮಾಜ-ರಮಾನಾಥ ರೈ: ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಜಾತಿ ವ್ಯವಸ್ಥೆಯಲ್ಲಿ ಸಂಖ್ಯಾ ಬಲವಿರುವವರಲ್ಲಿ ರಾಜಕೀಯವಾಗಿ ಹೆಚ್ಚು ಒಲವು ಇರುವುದು ಸಾಮಾನ್ಯ. ಸಣ್ಣ ಸಮುದಾಯದವರು ಉಪೇಕ್ಷಿಸಲ್ಪಡುತ್ತಾರೆ. ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಸಣ್ಣ ಸಮುದಾಯದ ಅಭಿವೃದ್ಧಿಗೆ ಹೆಚ್ಚು ಪ್ರಯತ್ನಿಸಿದ್ದೇನೆ. ಜನಪ್ರತಿನಿಧಿಗಳಿಗೆ ದೊರೆತ ಅವಕಾಶವನ್ನು ಸಣ್ಣ ಸಮುದಾಯ ಏಳಿಗೆಗೆ ಚಿಂತನೆ ಮಾಡಬೇಕು. ಅಽಕಾರ ಶಾಹಿ ವ್ಯವಸ್ಥೆಯಲ್ಲಿ ಯಾರ ಕೆಲಗಡೆ ಕೆಲಸ ಮಾಡುವ ಚಿಕ್ಕ ಸಮುದಾಯದವರು ಪ್ರಾಮಾಣಿಕ, ನಿಷ್ಠೆಯಿಂದ ಕೆಲಸ ಮಾಡುತ್ತಾರೆ. ಅವರು ನಂಬಿಕೆಗೆ ಅರ್ಹವಾಗಿ ಕೆಲಸ ಮಾಡುತ್ತಾರೆ. ಹೊರ ರಾಜ್ಯಗಳಲ್ಲಿ ಯಾದವ ಸಮಾಜ ಪ್ರಭಲ ರಾಜಕೀಯ ಪಕ್ಷವಾಗಿದೆ. ದ.ಕ ಜಿಲ್ಲೆಯಲ್ಲಿ ಚಿಕ್ಕ ಸಮುದಾಯವಾಗಿ ತನ್ನನ್ನು ತೊಡಗಿಸಿಕೊಂಡು ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಕೆಲಸ ಮಾಡುತ್ತಿದೆ ಎಂದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಽಕಾರಿ ಪದ್ಮರಾಜ್ ಆರ್ ಪೂಜಾರಿ ಮಾತನಾಡಿ, ಸಮುದಾಯದ ಸಮಸ್ಯೆ, ಸೌಲಭ್ಯಗಳನ್ನು ಈಡೆರಿಸಲು ಯಾದವ ನಿಗಮ ಮಂಡಳಿ ಸ್ಥಾಪನೆಯಾಗಬೇಕು. ಯಾದವ ನಿಗಮ ಸ್ಥಾಪಿಸುವ ನಿಮ್ಮ ಬೇಡಿಕೆಗೆ ಸಮುದಾಯದೊಂದಿಗೆ ಸಹಕಾರ ನೀಡಲಾಗುವುದು. ಯಾದವ ಸಭಾದ ಸಮುದಾಯ ಭವನ ನಿರ್ಮಾಣವಾಗಬೇಕು. ಇದಕ್ಕಾಗಿ ಜಾಗ ಗುರುತಿಸುವ ಕೆಲಸವಾಗಬೇಕು. ಸಂಘಟಿತರಾಗಿ ಸರಕಾರ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಯಾದವ ಸಮಾಜದೊಂದಿಗೆ ಸದಾ ಇದ್ದು ಸಮುದಾಯದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದ ಅವರು ಹಿಂದುಳಿದ ವರ್ಗಕ್ಕೆ ಸೇರಿದ ಸಣ್ಣ ಸಮುದಾಯದಿಂದ ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಸಮ್ಮೆಳನ ಆಯೋಜಿಸಿರುವುದನ್ನು ಶ್ಲಾಸಿದರು.
ಎಲ್ಲಾ ರಂಗಗಳಲ್ಲಿಯೂ ಸಮುದಾಯದ ಮುಂದುವರಿಯುವ ಚಿಂತನೆಗೆ ಮುನ್ನುಡಿಯಾಗಲಿ-ರವೀಶ ತಂತ್ರಿ: ಕುಂಟಾರು ರವೀಶ ತಂತ್ರಿಯವರು ಮಾತನಾಡಿ, ಜಿಲ್ಲಾ ಮಟ್ಟದ ಸಮ್ಮೇಳನ ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ಸಮಾವೇಶದ ಉದ್ದೇಶ ಮುಂದುವರಿಯವೇಕು. ಸಮುದಾಯದಲ್ಲಿರುವ ಒಳಿತು-ಕೆಡುಕುಗಳ ಬಗ್ಗೆ ಚಿಂತನೆ ನಡೆಸಬೇಕು. ಒಗ್ಗಟ್ಟಿನಿಂದ ಬಲಿಷ್ಠವಾಗಿ ಸಂಘಟಿತರಾಗಿ ಮುಂದುವರಿದು ಸಮುದಾಯದ ಪರಿವರ್ತನೆಗೆ ಪ್ರಯತ್ನಿಬೇಕು. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಒಗ್ಗಟ್ಟಾಗಬೇಕು. ಸ್ವಾಭಿಮಾನಿಗಳಾಗಿ ಮುಂದುವರಿಯುವ ಚಿಂತನೆ ಜಾಗೃತವಾಗಬೇಕು. ಈ ಸಮಾವೇಶವು ಸಮುದಾಯದ ಎಲ್ಲಾ ರಂಗಗಳಲ್ಲಿಯೂ ಮುಂದವರಿಯುವ ಚಿಂತನೆಗೆ ಮುನ್ನುಡಿಯಾಗಲಿ ಎಂದರು.
ಸಣ್ಣ ಸಮಾಜವೆಂಬ ಕೀಳರಿಮೆ ಬೇಡ-ಸಂಜೀವ ಮಠಂದೂರು: ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ನಮ್ಮದು ಸಣ್ಣ ಸಮುದಾಯವೆಂಬ ಕೀಳರಿಮೆ ಬೇಡ. ಪ್ರತಿ ಸಮಾಜಕ್ಕೂ ತನ್ನದೇ ಆದ ಶಕ್ತಿಯಿದೆ. ಆ ಶಕ್ತಿಯನ್ನು ಯಾದವ ಸಭಾದವರು ಪಾಣಾಜೆಯ ಗ್ರಾಮೀಣಪ್ರದೇಶಲ್ಲಿ ತೋರಿಸಿಕೊಟ್ಟಿದ್ದಾರೆ. ಸಮ್ಮೇಳನದ ಮೂಲಕ ಸಮುದಾಯದ ಸಂಸ್ಕಾರ, ಸಂಪ್ರದಾಯವನ್ನು ತಿಳಿಸುವ ಕೆಲಸವಾಗಿದೆ. ಹಳ್ಳಿಯ ಬದುಕನ್ನು ತೋರಿಸಿಕೊಡುವ ಕೆಲಸವಾಗಿದೆ. ಎಲ್ಲಾ ಸಮುದಾಯದವರನ್ನು ಒಟ್ಟು ಸೇರಿಸುವ ಮೂಲಕ ಪಾಣಾಜೆಯು ಇಂದು ಶ್ರೀಕೃಷ್ಣ ನಂದಗೋಕುಲವಾಗಿ ಪರಿವರ್ತನೆಯಾಗಿದೆ. ಪ್ರತಿ ಸಮುದಾಯದವರೂ ಇದೇ ರೀತಿ ಸ್ವಾಭಿಮಾನದಿಂದ ಬಾಳಿದರೆ ಹಿಂದು ಸಮಾಜಕ್ಕೆ ದೊಡ್ಡ ಶಕ್ತಿಯಾಗಲಿದೆ ಎಂದರು.
ಪ್ರತಿ ತಾಲೂಕಿನಲ್ಲಿ ಸಮ್ಮೆಳನ ಆಯೋಜಿಸಿ ಸಮುದಾಯಕ್ಕೆ ಶಕ್ತಿ ನೀಡಬೇಕು-ಅರುಣ್ ಕುಮಾರ್ ಪುತ್ತಿಲ: ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾ ಮಟ್ಟದ ಸಮಾವೇಶ ಹಮ್ಮಿಕೊಂಡು ಹಿಂದು ಸಮಾಜಕ್ಕೆ ಶಕ್ತಿ ನೀಡುವ ಕೆಲಸವಾಗಿದೆ. ಇದು ಎಲ್ಲಾ ಸಮಾಜದವರಿಗೂ ಉತ್ತಮ ಸಂದೇಶ ನೀಡಲಿದೆ. ಸಣ್ಣ ಸಮುದಾಯಕ್ಕೆ ಸರಕಾರದಿಂದ ಎಲ್ಲಾ ಸೌಲಭ್ಯಗಳು ದೊರೆಯಬೇಕು. ಸಂಸ್ಕೃತಿ ಉಳಿದಾಗ ದರ್ಮ ಉಳಿಯಲಿದೆ. ದರ್ಮ ಉಳಿದಾಗ ಸಮುದಾಯ ಉಳಿಯಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿನಲ್ಲಿ ಸಮ್ಮೆಳನ ಆಯೋಜಿಸಿಕೊಂಡು ಸಮುದಾಯಕ್ಕೆ ಇನ್ನಷ್ಟು ಶಕ್ತಿ ನೀಡಬೇಕು. , ಸಮಾಜದಲ್ಲಿರುವ ಎಲ್ಲಾ ಸಮುದಾಯಗಳ ನಡುವಿನ ಬಾಂಧವ್ಯ ಭದ್ರವಾಗಿ ಹಿಂದು ಧರ್ಮದ ಮುಂದಿನ ಸವಾಲುಗಳಿಗೆ ಉತ್ತರ ದೊರೆಯಲಿದೆ ಎಂದರು.
ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಪ್ರಬಲ ಸಮುದಾಯವಾಗಬೇಕು-ಗಿರೀಶ್ ಆಳ್ವ: ಉದ್ಯಮಿ, ಮಂಗಳೂರು ವರಾಹ ಅಸೋಸಿಯೇಟ್ಸ್ನ ಗಿರೀಶ್ ಆಳ್ವ, ಮಾತನಾಡಿ ಯಾದವ ಸಭಾವು ಗ್ರಾಮೀಣ ಪ್ರದೇಶಲ್ಲಿ ಉತ್ತಮ ಸಂಘಟನೆ ಮಾಡಿದ್ದು ಜಿಲ್ಲಾ ಮಟ್ಟದ ಸಮ್ಮೇಳನದಿಂದ ಸಮುದಾಯ ಶಕ್ತಿಯ ಅರಿವಾಗಿದೆ. ಮಕ್ಕಳಿಗೆ ಉನ್ನತ ಮಟ್ಟಡ ವಿದ್ಯಾಭ್ಯಾಸ ನೀಡುವ ಮೂಲಕ ಪ್ರಭಲ ಸಮುದಾಯವಾಗಿ ಮೂಡಿಬರಬೇಕು ಎಂದ ಅವರು, ಭಗವದ್ಗೀತೆಯ ಮೂಲಕ ಧರ್ಮದ ಸಾರವನ್ನು ವಿಶ್ವಕ್ಕೆ ಪಸರಿಸಿದ ಶ್ರೀಕೃಷ್ಣ ವಂಶದ ಯಾದವ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನಮ್ಮಲ್ಲರ ಭಾಗ್ಯ ಎಂದು ಹೇಳಿದರು.
ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆ ಮಾತನಾಡಿ, ಸಂಘದ ಸಾಧನೆ. ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಾದವಾ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಎ.ಕೆ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ಪಾಣಾಜೆ ಗ್ರಾ.ಪಂ ಉಪಾಧ್ಯಕ್ಷೆ ಜಯಶ್ರೀ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸತ್ಯನಾರಾಯಣ ಬಳೇರಿ, ಯಾದವಾ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು ಇದರ ಸಲಹಾ ಮಂಡಳಿಯ ಅಧ್ಯಕ್ಷ ಸುಧಾಮ ಆಲೆಟ್ಟಿ, ಉಪಾಧ್ಯಕ್ಷರಾದ ಗೋಪಾಲ ಅರಿಕೆಪದವು, ಶ್ರೀಹರಿ ನಡುಕಟ್ಟ ಪಾಣಾಜೆ, ವಿವಿ ಬಾಲನ್ ಹಾಗೂ ಪುರುಷೋತ್ತಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸತ್ಯನಾರಾಯಣ ಬೆಳೇರಿ, ಉಡುಪಿ ಜಿಲ್ಲಾ ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್., ಮಂಡಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ದ.ಕ ಜಿಲ್ಲಾ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘ್ ಅಧ್ಯಕ್ಷ ಕರುಣಾಕರ ಮಣಿಯಾಣಿ, ಅರಿಯಡ್ಕ ಗ್ರಾ.ಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಕೇಪು ಗ್ರಾ.ಪಂ ಅಧ್ಯಕ್ಷ ರಾಘವ ಮಣಿಯಾಣಿ, ಕಲಾರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಧ್ಯಾ ಮಂಡೆಕೋಲು ರವರನ್ನು ಸನ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರ: ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಇಂಜಿನಿಯರಿಂಗ್, ಸಿಎ, ಎಂ.ಕಾಂ., ಎಲ್ಎಲ್ಬಿ., ಎಂಬಿಎ, ಎಂಬಿಬಿಎಸ್ ಸೇರಿದಂತೆ ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಯಾದವ ಸಭಾ ತಾಲೂಕು ಸಮಿತಿ ಅಧ್ಯಕ್ಷ ಶ್ರೀ ಪ್ರಸಾದ್ ಪಾಣಾಜೆ ಸ್ವಾಗತಿಸಿದರು. ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಸದಾನಂದ ಕಾವೂರು ಪ್ರಸ್ತಾವಣೆ ಗೈದರು. ಕೋಶಾಧಿಕಾರಿ ಚಂದ್ರಶೇಖರ ಬಿ. ಠರಾವು ಮಂಡಿಸಿದರು.ಪುತ್ತೂರು ತಾಲೂಕು ಯುವ ವೇದಿಕೆಯ ಕಾರ್ಯದರ್ಶಿ ಶಿವಪ್ರಸಾದ್ ತಲೆಪ್ಪಾಡಿ ವಂದಿಸಿದರು. ನವೀನ್ ಕುಮಾರ್ ನಿಡ್ಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ಅವನೀಶ್ ಎ.ಆರ್ ಪ್ರಾರ್ಥಿಸಿದರು. ಅಶೋಕ್ ಅಮೈ, ರಂಜಿತ್ ಪಡ್ಯಂಬೆಟ್ಟು, ವಿದ್ಯಾಶ್ರೀ ಪಾಣಾಜೆ, ದಿನೇಶ್ ಯಾದವ್, ಮೀನಾಕ್ಷಿ ಶಿವರಾಮ್, ಧನಂಜಯ ಯಾದವ್ ಪಾಣಾಜೆ, ದಾಮೋದರ ಮಣಿಯಾಣಿ ಪಡ್ಯಂಬೆಟ್ಟು, ಸುಶಾಂತ್ ಮಣಿಯಾಣಿ, ನವೀನ್ ನಿಡ್ಪಳ್ಳಿ, ಪ್ರೇಮರಾಜ್ ಆರ್ಲಪದವು, ರಾಮಚಂದ್ರ ಮಣಿಯಾಣಿ ಪಡ್ಯಂಬೆಟ್ಟು ಹಾಗೂ ಕೃಷ್ಣಪ್ರಸಾದ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಮಾಜ ಬಾಂಧವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ, ಅಪರಾಹ್ನ ಯಾದವ ಸಮುದಾಯದ ಸಂಘಟನೆಯ ಪ್ರಾಮುಖ್ಯತೆ ಹಾಗೂ ಪ್ರಸ್ತುತ ಸವಾಲುಗಳ ಬಗ್ಗೆ ಚಿಂತನ-ಮಂಥನ ನಡೆಯಿತು. ಸಂಜೆ ಸಮ್ಮೇಳನದ ಸಮಾರೋಪ ಸಮಾರಂಭವೂ ನೆರವೇರಿತು.
ಹತ್ತು ವರ್ಷಗಳ ಬಳಿಕ ಜಿಲ್ಲಾ ಮಟ್ಟದ ಸಮ್ಮೇಳನ ನಡೆಯುತ್ತಿದೆ. ಇದಕ್ಕಾಗಿ ಕಳೆದ ಮೂರು ತಿಂಗಳ ಸತತ ಪ್ರಯತ್ನ ನಡೆದಿದೆ. ಈ ಸಮ್ಮೇಳನವು ಯಾವುದೇ ಸಮುದಾಯಗಳ ಜೊತೆಗಿನ ಸಂಘರ್ಷಕ್ಕಾಗಿ ಅಲ್ಲ. ಹದಿನೈದರಿಂದ ಇಪ್ಪತ್ತು ಸಾವಿರ ಮಾತ್ರ ಜನಸಂಖ್ಯೆಯಿರುವ ಸಮುದಾಯದಲ್ಲಿ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರ ಅಂತರ ಸರಿದೂಗಿಸಲು ಹಾಗೂ ಸಹಕಾರ ನೀಡುವ ಉದ್ದೇಶದಿಂದ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳದ ಮುಖಾಂತರ ಸಮುದಾಯದವರನ್ನು ಒಂದು ಗೂಡಿಸುವ ಪ್ರಯತ್ನವು ಪಾಣಾಜೆ ಗ್ರಾಮೀಣ ಪ್ರದೇಶಗಳಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ನಡೆದ ಕ್ರೀಡಾಕೂಟದಲ್ಲಿ ವಿವಿಧ ತಾಲೂಕುಗಳ ಸಮಾಜ ಬಾಂಧವರ ಸಂಗಮವಾಗಿತ್ತು.
-ಶ್ರೀಪ್ರಸಾದ್ ಪಾಣಾಜೆ, ಅಧ್ಯಕ್ಷರು ಯಾದವ ಸಭಾ ಪುತ್ತೂರು ತಾಲೂಕು
ಸರಕಾರಕ್ಕೆ ಠರಾವು ಪತ್ರ
ಯಾದವ ಸಭಾ ಕೇಂದ್ರ ಸಮಿತಿಗೆ ಮಂಗಳೂರು ಜಿಲ್ಲಾ ಕೇಂದ್ರ ವ್ಯಾಪ್ತಿ ಹಾಗೂ ಎಲ್ಲಾ ತಾಲೂಕುಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸುವುದು, ಯಾದವ ಸಭಾದ ವಿದ್ಯಾರ್ಥಿಗಳ ಹಾಸ್ಟೆಲ್ ಪ್ರಾರಂಭ, ಸಿಇಟಿ, ನೀಟ್, ಸಿಎ, ಯುಪಿಎಸ್ಸಿ ಹಾಗೂ ಕೆಎಎಸ್ ಪರೀಕ್ಷೆ ಬರೆಯಲು ತರಬೇತಿಗಳ ಪ್ರಾರಂಭ, ರಾಜ್ಯ, ಹೊರ ರಾಜ್ಯ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಹಾಗೂ ವಿದೇಶದಲ್ಲಿ ಶಿಕ್ಷಣ ಪಡೆಯಲು ವಿಶೇಷ ಅನುದಾನ ನೀಡುವುದು, ಚುನಾವಣಾ ಆಯೋಗದಿಂದ ಜಾತಿ ಪ್ರಮಾಣ ಪತ್ರವನ್ನು ಸರಿಪಡಿಸುವುದು, ಕೇಂದ್ರ ಸರಕಾರದ ಒಬಿಸಿಯಲ್ಲಿ ಯಾದವ ಜಾತಿಗಿರುವ ಮೀಸಲಾತಿಯಲ್ಲಿ ಆದಾಯದ ಮಿತಿಯನ್ನು ಹೆಚ್ಚಿಸುವುದು, ಕರ್ನಾಟಕ ಸರಕಾರ ಮಂಡಿಸುವ ಜಾತಿ ಗಣತಿಯಲ್ಲಿ ಆಗಿರುವ ಲೋಪವನ್ನು ಸರಿಪಡಿಸುವುದು, ಜಾತಿ ಗಣತಿಯಲ್ಲಿ ಪ್ರಸ್ತಾಪಿಸಿದ ಪ್ರವರ್ಗ 1ರ ಆದಾಯದ ಮಿತಿ ಹೆಚ್ಚಿಸುವುದು, ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡುವುದು, ಸಮುದಾಯದ ಸಂಸ್ಕೃತಿ ಉಳಿಸಿ ಬೆಳೆಸಲು ದ.ಕ ಜಿಲ್ಲೆಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸುವುದು ಮೊದಲಾದ ಬೇಡಿಕೆಗಳನ್ನು ಜನಪ್ರತಿನಿಧಿಗಳ ಮೂಲಕ ರಾಜ್ಯ ಸರಕಾರಕ್ಕೆ ಮಂಡಿಸಿದರು.