ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಲ್ಲಿ ಏಪ್ರಿಲ್ 29ರಂದು ವಿಶ್ವ ನೃತ್ಯ ದಿನದ ಸಲುವಾಗಿ ನೃತ್ಯಾಂತರಂಗ 127ನೇ ಸರಣಿಯನ್ನು ಆಚರಿಸಲಾಯಿತು.
ಸಂಸ್ಥೆಯ ಗುರು ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ವಿದ್ವಾನ್ ಗಿರೀಶ್ ಕುಮಾರ್, ವಿ. ವಸುಧಾ , ಪ್ರಣಮ್ಯ ಪಾಲೆಚ್ಚಾರು, ಶಮಾ ಚಂದುಕೂಡ್ಲು, ವಿಭಾಶ್ರೀ ಗೌಡ ಮತ್ತು ಮಾತಂಗಿ ಇವರು ನೃತ್ಯ ಪ್ರಸ್ತುತಿಗೈದರು.
ವಿದ್ವಾನ್ ಬಾಲಕೃಷ್ಣ ಭಟ್ ಹೊಸಮನೆ ಇವರು ಅಭ್ಯಾಗತರಾಗಿ ಕಲೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ವಿದುಷಿ ಸೌಜನ್ಯ ಪಡ್ವೆಟ್ನಾಯ ಕಾರ್ಯಕ್ರಮ ನಿರೂಪಿಸಿದರು.