ಪುತ್ತೂರು:ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಸೆಂಟ್ಯಾರು ಕಲ್ಲರ್ಪೆ ಸಮೀಪ ಕಾರ್ಪಾಡಿ ದ್ವಾರದ ಬಳಿ ಮೇ 11ರಂದು ಸರಣಿ ಅಪಘಾತ ನಡೆದಿದ್ದು ಬೈಕ್ ಸವಾರರು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ.
ನಾಯಿಯೊಂದು ಅಡ್ಡ ಬಂದ ಪರಿಣಾಮ ಅಪರಿಚಿತ ವಾಹನಕ್ಕೆ ದಿಢೀರ್ ಬ್ರೇಕ್ ಹಾಕಿದ್ದೇ ಅಪಘಾತಕ್ಕೆ ಕಾರಣವಾಗಿದೆ.ಘಟನೆಯಿಂದಾಗಿ ಅಪರಿಚಿತ ವಾಹನದ ಹಿಂದೆ ಇದ್ದ ಮೂರು ವಾಹನಗಳು ಜಖಂಗೊಂಡಿವೆ.ಮೂರನೇ ವಾಹನವು ಕಟೀಲಿನಿಂದ ಸಂಟ್ಯಾರ್ಗೆ ಬರುತ್ತಿದ್ದ ಮದುವೆ ವಾಹನವಾಗಿದ್ದು ಇದೂ ಅಪಘಾತಕ್ಕೀಡಾಗಿದೆ.ಸ್ಥಳಕ್ಕೆ ಸಂಪ್ಯ ಪೊಲೀಸರು ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.