ಅರಿಯಡ್ಕ : ಅರಿಯಡ್ಕ ಗ್ರಾಮದ ಗುಂಡ್ಯಡ್ಕ,ಮಾಯಿಲಕೊಚ್ಚಿ, ಶೇಷಗಿರಿ ,ಕುಂಟಾಪು ಮುಂತಾದ ಅನೇಕ ಭಾಗಗಳಲ್ಲಿ ಗಾಳಿ ಮಳೆಗೆ ಮರಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡ ಘಟನೆ ನಡೆದಿದೆ.
ಅದಲ್ಲದೇ ಗ್ರಾಮದ ವಿವಿಧ ಭಾಗಗಳಲ್ಲಿ ಕೃಷಿ ಉತ್ಪನ್ನಗಳು ನಾಶವಾಗಿದೆ.ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಪಾಣಾಜೆ ಉಪ ವಲಯ ಅರಣ್ಯಾಧಿಕಾರಿ ಮದನ್ ,ಕುಂಬ್ರ ಮೆಸ್ಕಾಂ ಶಾಖಾಧಿಕಾರಿ ರವೀಂದ್ರ ಆಗಮಿಸಿದ್ದಾರೆ.ಸಾರ್ವಜನಿಕರು ಆಗಮಿಸಿ ಸಹಕಾರ ನೀಡಿದರು.