ಶರವೂರು ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ

0

ಆಲಂಕಾರು: ಶ್ರೀ ದುರ್ಗಾಂಬ ಕಲಾಸಂಗಮ ಶ್ರೀ ಕ್ಷೇತ್ರ ಶರವೂರು ಆಲಂಕಾರು ಇದರ ವತಿಯಿಂದ ಮೇ.24ರಂದು ಮಧ್ಯಾಹ್ನ 2ರಿಂದ ಸಂಜೆ 5ರ ತನಕ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ 6ನೇ ಸೇವೆಯಾಗಿ ’ಸತ್ವ ಪರೀಕ್ಷೆ’ ಯಕ್ಷಗಾನ ತಾಳಮದ್ದಳೆ ನಡೆಯಿತು.


ಹಿಮ್ಮೇಳದಲ್ಲಿ ಭಾಗವತರಾಗಿ ಪದ್ಮನಾಭ ಕುಲಾಲ್, ನಿತೀಶ್ ಮನೊಳಿತ್ತಾಯ, ಚೆಂಡೆ ಮದ್ದಳೆಯಲ್ಲಿ ಕೇಶವ ಬೈಪಡಿತ್ತಾಯ, ಚಂದ್ರ ದೇವಾಡಿಗ ನಗ್ರಿ, ಶ್ರೀಹರಿ ನಗ್ರಿ, ಮುಮ್ಮೆಳದಲ್ಲಿ ಗಣರಾಜ ಕುಂಬ್ಳೆ (ಕೃಷ್ಣ1), ಅಂಬಾ ಪ್ರಸಾದ್ ಪಾತಾಳ (ಸುಭದ್ರೆ), ನಾರಾಯಣ ಭಟ್ ಆಲಂಕಾರು (ರುಕ್ಮಿಣಿ), ರಾಮ್ ಪ್ರಕಾಶ್ ಕೊಡಂಗೆ (ಅಭಿಮನ್ಯು), ರಾಘವೇಂದ್ರ ಭಟ್ ತೋಟಂತಿಲ (ದಾರುಕ), ದಿವಾಕರ ಆಚಾರ್ಯ ಗೇರುಕಟ್ಟೆ (ಅರ್ಜುನ 1), ಜಯರಾಮ ದೇವಸ್ಯ (ಅರ್ಜುನ 2), ರಾಮ್ ಪ್ರಕಾಶ್ ಕೊಡಂಗೆ (ಬಲರಾಮ), ದಿವಾಕರ ಆಚಾರ್ಯ ಗೇರುಕಟ್ಟೆ (ಕೃಷ್ಣ ೨), ಗುರುಪ್ರಸಾದ್ ಆಲಂಕಾರು (ಭೀಮ) ಸಹಕರಿಸಿದರು. ರಾಧಿಕಾ ಶ್ರೀನಿವಾಸ ರಾವ್ ಮತ್ತು ಮಕ್ಕಳು ಶರವೂರು, ಬೆಂಗಳೂರು ಹಾಗೂ ರಾಮ್ ಪ್ರಕಾಶ್ ಭಟ್ ಮತ್ತು ಮನೆಯವರು ಕೊಡಂಗೆ ಸೇವಾರ್ಥಿಗಳಾಗಿ ಸಹಕರಿಸಿದರು. ಸಂಗಮದ ಸದಸ್ಯರಾದ ಗುರುಪ್ರಸಾದ್ ಆಲಂಕಾರು ಸ್ವಾಗತಿಸಿ, ವಂದಿಸಿದರು. ಸೇವಾರ್ಥಿಗಳಿಗೆ ದೇವಸ್ಥಾನದ ವತಿಯಿಂದ ಸೇವಾ ಪ್ರಸಾದವನ್ನು ನೀಡಲಾಯಿತು.

LEAVE A REPLY

Please enter your comment!
Please enter your name here