ಬಿಳಿಯೂರು; ರಸ್ತೆ ದುರಸ್ತಿಗೆ ಆಕ್ಷೇಪಿಸಿ ಹಲ್ಲೆ, ಚಿನ್ನದ ಸರ ಕಸಿದ ಆರೋಪ-ದೂರು

0

ಉಪ್ಪಿನಂಗಡಿ: ರಸ್ತೆ ದುರಸ್ತಿಗೆ ಆಕ್ಷೇಪಿಸಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆಗೈದು ಮಹಿಳೆಯೊಬ್ಬರ ಕೊರಳಲಿದ್ದ 3 ಪವನ್ ತೂಕದ ಚಿನ್ನದ ಸರ ಕಸಿದುಕೊಂಡು ಹೋಗಿದ್ದಾರೆ ಎಂದು ಬಿಳಿಯೂರು ಗ್ರಾಮದ ನಡುಮನೆ ನಿವಾಸಿ ವಾಸಪ್ಪ ನಾಯ್ಕ ಎಂಬವರು ನೀಡಿದ ದೂರಿನಂತೆ ಇಬ್ಬರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.


ಮೇ .26ರಂದು ಮಧ್ಯಾಹ್ನ ಗ್ರಾಮಸ್ಥರ ಜೊತೆಯಲ್ಲಿ ಬಿಳಿಯೂರು ಗ್ರಾಮದ ಕೋಡ್ಲೆ ಎಂಬಲ್ಲಿ ಶ್ರಮದಾನದ ಮೂಲಕ ರಸ್ತೆ ದುರಸ್ಥಿ ಮಾಡುತ್ತಿರುವಾಗ ಅಲ್ಲಿಯೇ ಹತ್ತಿರದ ಮನೆಯ ಗಂಗಾವತಿ ಭಟ್ ಮತ್ತು ಅವರ ಮಗ ಅದಿತ್ಯ ಭಟ್ ಹಾಗೂ ಇತರರು ಏಕಾಏಕಿ ಬಂದು ದಾರಿ ರಿಪೇರಿ ಮಾಡಬೇಡಿ ಎಂದು ಬೆದರಿಸಿದ್ದಾರೆ. ಈ ವೇಳೆ ಜೊತೆಯಲ್ಲಿದ್ದ ಪುಷ್ಪಾ ಎಂಬವರು ಯಾಕೆ ರಸ್ತೆ ರಿಪೇರಿ ಮಾಡಬಾರದು ಎಂದು ಕೇಳಿದಾಗ ಆರೋಪಿತರೆಲ್ಲರೂ ವಾಸಪ್ಪ ಅವರನ್ನು ಹಿಡಿದು ಹಲ್ಲೆ ನಡೆಸಿ ಜಾತಿನಿಂದನೆ ಮಾಡಿ, ಜೊತೆಯಲ್ಲಿದ್ದ ಪುಷ್ಪಾರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಅಕ್ರಮಣ ಮಾಡುವ ರೀತಿ ಹಲ್ಲೆಗೈದು ಪುಷ್ಪಾರವರ ಕೊರಳಲ್ಲಿದ್ದ ಸುಮಾರು 3 ಪವನ ತೂಕದ ಚಿನ್ನದ ಸರವನ್ನು ಕಸಿದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಉಪ್ಪಿನಂಗಡಿ ಠಾಣಾ ಅ.ಕ್ರ:46/2025 ಕಲಂ: 115(2),351(2),352,119(1),ಜೊತೆಗೆ 3(5) ) ಭಾರತೀಯ ನ್ಯಾಯ ಸಂಹಿತ 2023 ಮತ್ತುಕಲಂ: 3(1)(ಡಿ), 3(1)() SC/ST Act2015ಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here