ಕೆದಂಬಾಡಿ ಬಾರಿಕೆ ನಿವಾಸಿ ದಿವಾಕರ ನಾಪತ್ತೆಯಾಗಿ ಒಂದು ವರ್ಷ- ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಪೊಲೀಸ್ ಮನವಿ

0

ಪುತ್ತೂರು: ಕೆದಂಬಾಡಿ ಗ್ರಾಮದ ಬಾರಿಕೆ ನಿವಾಸಿ ಸಂಕಪ್ಪ ಪೂಜಾರಿ ಎಂಬವರ ಪುತ್ರ ಕೂಲಿ ಕಾರ್ಮಿಕ ದಿವಾಕರ (37ವ) ಎಂಬವರು ನಾಪತ್ತೆಯಾಗಿ ಸುಮಾರು 1 ವರ್ಷ ಕಳೆದಿದೆ. ಕಾಣೆಯಾದ ವ್ಯಕ್ತಿಯ ಪತ್ತೆಯಾದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.


ಕೂಲಿ ಕಾರ್ಮಿಕರಾಗಿರುವ ದಿವಾಕರ ಅವರು 2024ರ ಎ.27ರಂದು ಬೆಳಗ್ಗೆ ಗಂಟೆ 6ಕ್ಕೆ ಮನೆಯಿಂದ ಹೊರಟು ಹೋದವರು ಮತ್ತೆ ಮನೆಗೆ ಹಿಂದಿರುಗಿಲ್ಲ. ಈ ಕುರಿತು ಮನೆ ಮಂದಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕಾಣೆಯಾದ ವ್ಯಕ್ತಿಯ ಪತ್ತೆಯ ಬಗ್ಗೆ ಪ್ರಯತ್ನಿಸಿದರೂ ಈ ತನಕ ವ್ಯಕ್ತಿ ಪತ್ತೆಯಾಗಿಲ್ಲ. ಇದೀಗ ಕಾಣೆಯಾದ ವ್ಯಕ್ತಿ ಪತ್ತೆಯಾದಲ್ಲಿ ಸಂಪ್ಯ ಪೊಲೀಸರಿಗೆ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ಕನ್ನಡ, ತುಳು, ಮಲಯಾಳಂ ಭಾಷೆಯನ್ನು ಮಾತನಾಡುವ ದಿವಾಕರ ಅವರು ಕೂಲಿ ಕೆಲಸ ಮಾಡುತ್ತಾರೆ. ಇವರ ಗುರುತು ಪರಿಚಯ ಸಿಕ್ಕಲ್ಲ ತಕ್ಷಣ ಪೊಲೀಸರಸನ್ನು ಸಂಪರ್ಕಿಸುವಂತೆ ಪೊಲೀಸರ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here