ಸವಣೂರು: ವಿದ್ಯಾರಶ್ಮಿ ಪ್ರಥಮದರ್ಜೆ ಕಾಲೇಜಿನ ತೃತೀಯ ಬಿ.ಎ ವಿದ್ಯಾರ್ಥಿಗಳು ಬಳ್ಪ ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿ ಮತ್ತು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಜಿನ ಮಂದಿರ ಅತಿಶಯ ಶ್ರೀ ಕ್ಷೇತ್ರ ಪುದಬೆಟ್ಟು, ಸವಣೂರು ಇಲ್ಲಿಯ ವಿಚಾರಗಳ ಸಂಗ್ರಾಹ್ಯಕೃತಿಯನ್ನು ಬರೆದು ಪ್ರಕಟಿಸಿರುವ ಮೆಲುಕು ಪುಸ್ತಕದ ಬಿಡುಗಡೆ ಕಾರ್ಯಕ್ರಮ ಮೇ.29 ರಂದು ನಡೆಯಿತು.
ಕಾರ್ಯಕ್ರಮದ ಅತಿಥಿಗಳಾಗಿದ್ದ ಶ್ರೀವತ್ಸ ಮೋರಾಜೆ ವಿಷ್ಣುಮೂರ್ತಿ, ಅರ್ಚಕರು ಮತ್ತು ಆಡಳಿತ ಮುಕ್ತೇಶ್ವರ ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿದೇವಸ್ಥಾನ, ಬಳ್ಪ ಇಲ್ಲಿಯ ಸ್ಥಳ ಚಾರಿತ್ರ್ಯವನ್ನು ತಿಳಿಸಿಕೊಟ್ಟರು.ಇನ್ನೋರ್ವ ಅತಿಥಿಗಳಾಗಿದ್ದ ಸವಣೂರು ಜೈನದೇವಾಲಯ ನಿರ್ವರ್ಹಣಾ ಸಮಿತಿ ಅಧ್ಯಕ್ಷ ಶತ್ರುಂಜಯ್ ಜೈನ್ ಇತಿಹಾಸದ ಮಹತ್ವವನ್ನು ತಿಳಿಸುವುದರೊಂದಿಗೆ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರ ಅತಿಶಯ ಶ್ರೀ ಕ್ಷೇತ್ರ ಪುದಬೆಟ್ಟುಇಲ್ಲಿಯ ಸ್ಥಳಚಾರಿತ್ರ್ಯವನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಡ್ವೊಕೇಟ್ ಅಶ್ವಿನ್ ಎಲ್. ಶೆಟ್ಟಿಯವರು ವಹಿಸಿದ್ದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸವಣೂರು ಕೆ.ಸೀತಾರಾಮ ರೈಯವರು ಮೆಲುಕು ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದರು.ವೇದಿಕೆಯಲ್ಲಿ ವಿದ್ಯಾರಶ್ಮಿ ಪ್ರಥಮದರ್ಜೆಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜಲಕ್ಷ್ಮೀಎಸ್ರೈ ಮತ್ತು ಉಪಪ್ರಾಂಶುಪಾಲರಾದ ಶೇಷಗಿರಿ ಎಂ ಉಪಸ್ಥಿತರಿದ್ದರು. ವಿದ್ಯಾರಶ್ಮಿ ಪ್ರಥಮದರ್ಜೆಕಾಲೇಜಿನ ಇತಿಹಾಸ ಉಪನ್ಯಾಸಕಿಯಾದ ಪ್ರತಿಭಾಎಸ್ ಕಾರ್ಯಕ್ರಮ ನಿರ್ವಹಿಸಿದವರು.