ಪುತ್ತೂರು: ವೀರಮಂಗಲದ ಆನಾಜೆಯ ಶ್ರೀಮಹಾವಿಷ್ಣು ಸೇವಾ ಪ್ರತಿಷ್ಠಾನದ ನೂತನ ಅಧ್ಯಕ್ಷರಾಗಿ ಹರೀಶ್ ಆಚಾರ್ಯ ಹಾಗೂ ಕಾರ್ಯದರ್ಶಿಯಾಗಿ ವಿಜಯ ಕುಮಾರ್ ಆಯ್ಕೆಯಾಗಿದ್ದಾರೆ.
ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಕುಮಾರಧಾರ ಸಭಾಭನವದಲ್ಲಿ ನಡೆದ ಪ್ರತಿಷ್ಠಾನದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಕಾರ್ಯಾಧ್ಯಕ್ಷರಾಗಿ ವಸಂತ ಗೌಡ ಸೇರಾಜೆ, ಉಪಾಧ್ಯಕ್ಷರಾಗಿ ನಿರಂಜನ್ ವಿ., ಜತೆ ಕಾರ್ಯದರ್ಶಿಯಾಗಿ ಪುನೀತ್, ಕೋಶಾಧಿಕಾರಿಯಾಗಿ ಭವಿತ್ ಆನಾಜೆ, ಸದಸ್ಯರಾಗಿ ಉಮೇಶ್ ಕೆ. ಕೋಡಿಬೈಲು, ಸುಂದರ ಕುಲಾಲ್ ಆನಾಜೆ, ಲಕ್ಷ್ಮಣ ಗೌಡ ಡೆಬ್ಬೇಲಿ, ಪ್ರಕಾಶ ಕುಲಾಲ್ ಆನಾಜೆ, ಗೋಪಾಲಕೃಷ್ಣ ವೀರಮಂಗಲ, ಮಹೇಶ್ ರೈ ಆನಾಜೆ, ಯಶೋಧರ ಆನಾಜೆ, ಚಿತ್ತೇಶ ಕುಲಾಲ್, ಮನೋಜ್ ಆನಾಜೆ ಆಯ್ಕೆಯಾದರು.
ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ವೀರಮಂಗಲ ಮಾತನಾಡಿ, ಕಳೆದ 24 ವರ್ಷಗಳಿಂದ ಪ್ರತಿಷ್ಠಾನವು ಉತ್ತಮ ಕಾರ್ಯಕ್ರಮಗಳೊಂದಿಗೆ ಮುನ್ನಡೆಯುತ್ತಿದ್ದು, ಮುಂದೆ ಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸುವ ಬಗ್ಗೆ ತಿಳಿಸಿದರು.
ವೀರಮಂಗಳ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಿಶ್ವಸ್ಥ ಮಂಡಳಿ ಅಧ್ಯಕ್ಷ ಉಮೇಶ್ ಕೋಡಿಬೈಲು, ಪ್ರತಿಷ್ಠಾನದ ಕಾರ್ಯಾಧ್ಯಕ್ಷ ವಸಂತ ಗೌಡ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು. ನೂತನ ಅಧ್ಯಕ್ಷ ಹರೀಶ್ ಆಚಾರ್ಯ ಸ್ವಾಗತಿಸಿ, ವಂದಿಸಿದರು. ನಿರಂಜನ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.