ಪುತ್ತೂರು : ಪುಣಚ ಅಜ್ಜಿನಡ್ಕ ದ.ಕ.ಜಿ.ಪ.ಸ.ಹಿ.ಪ್ರಾ.ಶಾಲೆಯಲ್ಲೇ ಸುಮಾರು 27 ವರುಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಇಲ್ಲಿನ ತೆಂಕಿಲ ನಿವಾಸಿ ಕಮಲ ಬಿ ಮೇ.31 ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.
ತನ್ನ ಪ್ರೌಢ ಶಾಲಾ ಶಿಕ್ಷಣವನ್ನು ಬೆಟ್ಟಂಪಾಡಿಯಲ್ಲಿ ಪೂರೈಸಿದ ಬಳಿಕ , ಶಿಕ್ಷಕ ಶಿಕ್ಷಣ ತರಬೇತಿಯನ್ನು ಉಡುಪಿ ಕೋಕರ್ಣೆಯ ಕೆ ಯು ಟಿ ಟಿ ಐ ಯಲ್ಲಿ ಪಡೆದುಕೊಂಡು , ಆ ಬಳಿಕ 5 ವರ್ಷಗಳ ಕಾಲ ಬೆಟ್ಟಂಪಾಡಿ ಪ್ರಾಥಮಿಕ ಶಾಲೆಯಲ್ಲಿ ಗೌರವ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿದ್ದ ಇವರು , ಬಳಿಕ ಸರ್ಕಾರಿ ಶಿಕ್ಷಕಿಯಾಗಿ ಪುಣಚ ಅಜ್ಜಿನಡ್ಕ ಶಾಲೆಗೆ ನೇಮಕಗೊಂಡಿದ್ದರು. ಕಳೆದ 5 ವರ್ಷಗಳಿಂದ ಅದೇ ಶಾಲೆಯಲ್ಲಿ ಪ್ರಭಾರ ಮುಖ್ಯ ಗುರುಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.
ಇವರ ಹಿರಿಯ ಮಗಳು ಯಶಸ್ವಿ ಎಸ್ ಆರ್ ಹಾಗೂ ಅಳಿಯ ಸನಲ್ ಕುಮಾರ್ ಇಬ್ಬರೂ ಕೂಡ ಸಾಫ್ಟ್ ವೇರ್ ಉದ್ಯೋಗಿಯಾಗಿ ಸ್ವೀಡನ್ ನಲ್ಲಿ ನೆಲೆಸಿದ್ದಾರೆ. ಕಿರಿಯ ಮಗಳು ಶ್ರೇಯಸ್ವಿ ಎಸ್ ಆರ್ ಮತ್ತು ಇಲ್ಲಿನ ಮಹಾಲಸಾ ಆರ್ಕೇಡ್ ನಲ್ಲಿ ವ್ಯವಹರಿಸುತ್ತಿರುವ ಕೋರ್ ಟೆಕ್ನಾಲಜಿಸ್ ಸಮೂಹ ಸಂಸ್ಥೆಗಳ ಮಾಲೀಕ ಅನೂಪ್ ಕೆ.ಜೆ ಇವರ ಅಳಿಯ. ಸೋಹನ್ ಶ್ರೀಯಾನ್ ,ದಿಯಾನ್ ತಕ್ಷ್ ಹಾಗೂ ಬೇಬಿ ಇಶಾಲಕ್ಷ್ಮೀ ಇವರ ಮೊಮ್ಮಕ್ಕಳಿದ್ದು , ಪತಿ ರುಕ್ಮಯ ಗೌಡ ಇವರೊಂದಿಗೆ ತೆಂಕಿಲದಲ್ಲಿ ಸುಖೀ ಜೀವನ ನಡೆಸುತ್ತಿದ್ದಾರೆ.
