ತಡೆಗೋಡೆ ನಿರ್ಮಿಸದೆ ಸರ್ವಿಸ್ ರಸ್ತೆ ನಿರ್ಮಾಣ : ಮಾಣಿ ಹೈಸ್ಕೂಲ್ ಬಳಿ ಗುಡ್ಡ ಕುಸಿತ

0

ವಿಟ್ಲ : ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ನಡೆಸುತ್ತಿರುವ ಕಂಪೆನಿಯು ಮಾಣಿ ಹೈಸ್ಕೂಲ್ ಬಳಿ ಸರ್ವಿಸ್ ರಸ್ತೆಗೆ ಮಣ್ಣು ಕುಸಿಯದಂತೆ ತಡೆಗೋಡೆ ನಿರ್ಮಿಸದ ಕಾರಣ ನಿರಂತರ ಸುರಿಯುತ್ತಿರುವ ಮಳೆಗೆ ಗುಡ್ಡ ಕುಸಿದು ಮಣ್ಣುಗಳೆಲ್ಲಾ ರಸ್ತೆಯ ಮೇಲೆ ತುಂಬಿಕೊಂಡಿದೆ. ಅಗತ್ಯವಿರುವ ಕಡೆ ತಡೆಗೋಡೆ ಅರ್ಧಂಬರ್ಧ ಮಾಡಿ ಹೋಗುವುದು ಮತ್ತು ತಡೆಗೋಡೆ ನಿರ್ಮಿಸದೇ ಬಿಡುವುದರಿಂದಲೂ ಹಲವಾರು ಮನೆಗಳು,ವಿದ್ಯುತ್ ಕಂಬಗಳು ಕುಸಿದು ಬೀಳುವ ಹಂತದಲ್ಲಿದೆ. ಕಂಪೆನಿಯ ಇಂತಹ ಕಾಮಗಾರಿ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here