ತಿಂಗಳಾಡಿ: ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ, ಶಿಲಾನ್ಯಾಸ

0

ಪುತ್ತೂರು: ಸುಮಾರು 1 ಕೋಟಿ 65 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ತಿಂಗಳಾಡಿಯಲ್ಲಿ ನಿರ್ಮಾಣಗೊಳ್ಳಲಿರುವ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಮೇ.30ರಂದು ನಡೆಯಿತು. ಅರ್ಚಕ ರವಿರಾಮ ಭಟ್ ಸನ್ಯಾಸಿಗುಡ್ಡೆರವರು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಭೂಮಿ ಪೂಜೆ ನೆರವೇರಿಸಿದರು. ಸಂಘದ ಅಧ್ಯಕ್ಷರಾದ ಶಶಿಧರ ರಾವ್ ಬೊಳಿಕಳರವರು ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಇಂಜಿನೀಯರ್ ರವೀಂದ್ರ ರೈ ದಕ್ಷ, ಗುತ್ತಿಗೆದಾರ ಯುವರಾಜ್ ಮೇರ್ಲ, ಹರಿಪ್ರಸಾದ್, ಪ್ರೀತೇಶ್, ಸಂಘದ ಮಾಜಿ ಕಾರ್ಯನಿರ್ವಾಹಣಾಧಿಕಾರಿ ರಾಮಯ್ಯ ರೈ ತಿಂಗಳಾಡಿ, ಸಂಘದ ಉಪಾಧ್ಯಕ್ಷರಾದ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ನಿರ್ದೇಶಕರುಗಳಾದ ಜನಾರ್ದನ ರೈ ಕೊಡಂಕೀರಿ, ರಿತೇಶ್ ಮೇರ್ಲ, ಪುಷ್ಪಲತಾ ಜೆ ರೈ, ಜಯಂತಿ, ಲೋಕೇಶ್ ಬೋಳೋಡಿ, ಪ್ರವೀಣ, ಸಂತೋಷ್ ಕುಮಾರ್ ರೈ ಕೋರಂಗ, ಮಾಜಿ ನಿರ್ದೇಶಕರುಗಳಾದ ಸೂರ್ಯಪ್ರಸನ್ನ ರೈ ಎಂಡೆಸಾಗು, ಭಾಸ್ಕರ ಬಲ್ಲಾಳ್ ಕೆದಂಬಾಡಿಬೀಡು, ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ವಿನಯ ಕುಮಾರ ರೈ ದೇರ್ಲ, ಸಿಬ್ಬಂದಿಗಳಾದ ಸೂರಜ್ ಕುಮಾರ್ ಕೆ, ನಿರುಪಮಾ ಪಿ ಶೆಟ್ಟಿ, ಪ್ರೀತಮ್ ಬಿ ರೈ, ಕೌಶಲ್ಯ ಎಂ, ದುರ್ಗಾಕಿರಣ್ ರೈ ಕೆ, ಚರಣ್‌ರಾಜ್, ಐತ್ತಪ್ಪ ನಾಯ್ಕ, ಪ್ರದೀಪ, ಅಣ್ಣು ಟಿ, ಕೊರಗಪ್ಪ ಟಿ ಹಾಗೂ ಕೃಷ್ಣ ಭಟ್ ಉಂಡೆಮನೆ, ಪ್ರಸನ್ನ ರೈ ಮಜಲುಗದ್ದೆ, ಬ್ರಿಜೇಶ್ ರೈ, ರವಿ ಕುಮಾರ್ ಕೈತ್ತಡ್ಕ, ಆನಂದ ರೈ ಮಠ, ರಾಜೇಶ್ ಎಂ ಎಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here