ಹಲಸು ಹಣ್ಣು ಮೇಳ-2025- ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ನವತೇಜ ಟ್ರಸ್ಟ್‌ ಆಯೋಜನೆಯ 7ನೇ ಆವೃತ್ತಿಯ ಹಲಸು ಹಣ್ಣು ಮೇಳ-2025 ಜೂ.6ರಿಂದ 8ರವರೆಗೆ ನಗರದ ಕಿಲ್ಲೆ ಮೈದಾನದಲ್ಲಿ ನಡೆಯಲಿದ್ದು, ಮೇ. 29ರಂದು ಆಮಂತ್ರಣ ಪತ್ರ ಬಿಡುಗಡೆ ಮಾಡಲಾಯಿತು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರಭಟ್‌ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ನವತೇಜ ಟ್ರಸ್ಟ್‌ ಅಧ್ಯಕ್ಷ ಅನಂತ ಪ್ರಸಾದ್‌ ನೈತ್ತಡ್ಕ, ಟ್ರಸ್ಟಿ ಸುಹಾಸ್‌ ಮರಿಕೆ, ಅಶ್ವಿನಿ ಕೃಷ್ಣ ಮುಳಿಯ, ಮತ್ತು ಅನ್ನಪೂರ್ಣ ಶರ್ಮಾ, ಉಪಸ್ಥಿತರಿದ್ದರು. ಆಮಂತ್ರಣ ಪತ್ರ ಬಿಡುಗಡೆಗೂ ಮುನ್ನ ಟ್ರಸ್ಟ್‌ ಅಧ್ಯಕ್ಷ ಅನಂತ ಪ್ರಸಾದ್‌ ನೈತ್ತಡ್ಕ ಪ್ರಾರ್ಥನೆ ನೆರವೇರಿಸಿದರು.

LEAVE A REPLY

Please enter your comment!
Please enter your name here