ಪುತ್ತೂರಿನಲ್ಲಿ ಸ್ಕೂಲ್ ಲೀಡರ್ ಕನ್ನಡ ಚಲನಚಿತ್ರ ತೆರೆಗೆ – ಪ್ರಥಮ ದಿನವೇ ಪ್ರೇಕ್ಷಕರಿಂದ ಭಾರಿ ಪ್ರಶಂಸೆ

0

ಪುತ್ತೂರು: ಸನ್ ಮ್ಯಾಟ್ರಿಕ್ಸ್ ಬ್ಯಾನರ್‌ನಡಿ ತಯಾರಾಗಿರುವ ಕೆ. ಸತ್ಯೇಂದ್ರ ಪೈ ನಿರ್ಮಾಣದಲ್ಲಿ ಕರಾವಳಿಯಾದ್ಯಂತ ಬಿಡುಗಡೆಗೊಂಡ ‘ಸ್ಕೂಲ್ ಲೀಡರ್’ ಕನ್ನಡ ಚಲನಚಿತ್ರವು ಮೇ 30ರಂದು ಪುತ್ತೂರು ಜಿ.ಎಲ್ ವನ್ ಮಾಲ್‌ನಲ್ಲಿರುವ ಭಾರತ್ ಟಾಕೀಸ್ ನಲ್ಲಿ ಬಿಡುಗಡೆಗೊಂಡಿತು. ಚಿತ್ರವು ಪ್ರಥಮ ದಿನವೇ ಪ್ರೇಕ್ಷರಿಂದ ಭಾರಿ ಪ್ರಶಂಸೆಗೊಳಪಟ್ಟಿದೆ.


ನಾಯಕತ್ವ ಬೆಳೆಸುವ ಸ್ಕೂಲ್ ಲೀಡರ್ ಬೆಳಗಲಿ:
ನಿವೃತ್ತ ಶಿಕ್ಷಕ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಅವರು ದೀಪ ಪ್ರಜ್ವಲನೆ ಮೂಲಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹೊಸ ಕಲ್ಪಣೆ ಮತ್ತು ಶಿಕ್ಷಣ ವ್ಯವಸ್ಥೆ ಹೇಗಿರಬೇಕು ಮತ್ತು ಮಕ್ಕಳು ನಾಯಕತ್ವ ಹೇಗೆ ಬೆಳೆಸಬೇಕೆಂಬ ಕುರಿತು ಮೂಡಿ ಬಂದಿರುವ ಚಲನ ಚಿತ್ರ ಸ್ಕೂಲ್ ಲೀಡರ್ ಬೆಳಗಬೇಕೆಂದರು.


ಇಂತಹ ಚಿತ್ರದ ಮೂಲಕ ಪುತ್ತೂರಿನ ಪ್ರತಿಭೆಗಳು ಬೆಳಗಲಿ:
ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್ ಮಹಮ್ಮದ್ ಆಲಿ ಅವರು ಮಾತನಾಡಿ ಪ್ರೌಢಶಾಲಾ ಮಕ್ಕಳ ಮನೋವಿಕಾಸ ಮತ್ತು ಶೈಕ್ಷಣಿಕ ಬದುಕು ಹಾಗು ನಾಯಕತ್ವದ ಗುಣಮಟ್ಟ ಯಾವ ರೀತಿ ಗುರುತಿಸುವುದು ಎಂಬ ಚಿತ್ರ ಎಂಬುದನ್ನು ನಾನು ತಿಳಿದುಕೊಂಡಿದ್ದೇನೆ. ನಾನು ಕೂಡಾ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆಗೆ ನಿಂತು ನಾಯಕತ್ವದ ಗುಣ ಬೆಳೆಸಿಕೊಂಡು ಬಳಿಕ ರಾಜಕೀಯ ಕ್ಷೇತ್ರಕ್ಕೆ ಬಂದವ. ಇಂತಹ ಚಲನ ಚಿತ್ರದ ಮೂಲಕ ಪುತ್ತೂರಿನ ಪ್ರತಿಭೆಗಳು ಬೆಳಗಬೇಕು. ಕಥೆ, ಚಿತ್ರ ನಿರ್ದೇಶನ ಮಾಡಿದ ಪೆನ್ಸಿಲ್ ಬಾಕ್ಸ್ ಚಲನಚಿತ್ರ ಖ್ಯಾತಿಯ ರಜಾಕ್ ಪುತ್ತೂರು, ದೀಕ್ಷಾ ರೈ ನಟಿಸಿರುವ ಈ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.


ಶೈಕ್ಷಣಿಕ ವ್ಯವಸ್ಥೆಯನ್ನು ಬಲಪಡಿಸುವ ಚಿತ್ರ:
ಸುದಾನ ವಸತಿಯುತ ಶಾಲಾ ಸಂಚಾಲಕ ರೇ ವಿಜಯ ಹಾರ್ವಿನ್ ಅವರು ಮಾತನಾಡಿ ದಯಾನಂದ ರೈ ಬೆಟ್ಟಂಪಾಡಿ ವಿಶೇಷ ಆಲೋಚನೆ ಮತ್ತು ರಜಾಕ್ ಪುತ್ತೂರು ಅವರು ಚಿತ್ರಕಥೆ ಬರೆದಾಗ ಪೆನ್ಸಿಲ್ ಬಾಕ್ಸ್ ತೆರೆಗೆ ಬಂದಿತ್ತು. ಅದು ಬಹಳ ಯಶಸ್ವಿಯಾಗಿತ್ತು. ಇದೀಗ ಸ್ಕೂಲ್ ಲೀಡರ್ ಬಂದಿದೆ. ಚಿತ್ರ ಶೈಕ್ಷಣಿಕ ಸ್ಥಿತಿಗತಿಗಳನ್ನು ಹೊರ ತರುವ ಮತ್ತು ಅದರ ಕುಂದುಕೊರತೆಗಳು ಹಾಗು ಸರಿಪಡಿಸುವ ವಿಚಾರವನ್ನು ಸಮಾಜಕ್ಕೆ ನೀಡುವ ಮೂಲಕ ಶೈಕ್ಷಣಿಕ ವ್ಯವಸ್ಥೆಯನ್ನು ಬಲಪಡಿಸುವ ಚಿತ್ರವಾಗಿ ಮೂಡಿ ಬಂದಿದೆ. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಸಮಾಜ ಸೇರಿಕೊಂಡು ಶೈಕ್ಷಣಿಕ ವ್ಯವಸ್ಥೆಯನ್ನು ಮುಂದಿನ ಜನಾಂಗಕ್ಕೆ ಹೇಗೆ ಕೊಂಡೊಯ್ಯಬಹುದು ಎಂಬುದನ್ನು ಈ ಚಿತ್ರ ತೋರಿಸಲಿದೆ. ಚಿತ್ರ ಯಶಸ್ವಿಯಾಗಲಿ ಎಂದರು.


ಶೈಕ್ಷಣಿಕ ಕ್ರಾಂತಿ ಮಾಡುವ ಚಿತ್ರವಾಗಿ ಮೂಡಲಿ:
ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ ಅವರು ಮಾತನಾಡಿ ಶೈಕ್ಷಣಿಕ ಕ್ರಾಂತಿ ಮಾಡುವ ಉತ್ತಮ ಚಲನಚಿತ್ರವಾಗಿ ಮೂಡಿ ಬರಲಿ. ಪುತ್ತೂರಿನ ಶಿಕ್ಷಣ ಇಲಾಖೆ ಪರವಾಗಿ ಪ್ರಾಥಮಿಕ ಶಿಕ್ಷಣ ಸಂಘದಲ್ಲಿದ್ದು ಕಾಲೇಜು, ಪ್ರಾಥಮಿಕ, ಪ್ರೌಢಶಾಲೆಗಳ ವಿದ್ಯಾರ್ಥಿಗಳು ಈ ಚಲನ ಚಿತ್ರವನ್ನು ನೋಡುವಂತಾಗಲಿ ಎಂದು ಹಾರೈಸಿದರು.


ಬದುಕಿಗೆ ಹತ್ತಿರವಾದ ಚಿತ್ರ:
ಚಲನಚಿತ್ರ ನಟಿ ಡಾ. ಅನನ್ಯಲಕ್ಷ್ಮೀ ಅವರು ಮಾತನಾಡಿ ಸ್ಕೂಲ್ ಲೀಡರ್ ಅನ್ನುವಂತಹದ್ದು ಕಲ್ಪಣೆಯ ಚಿತ್ರವಲ್ಲ. ನಮ್ಮ ಬದುಕಿಗೆ ಹತ್ತಿರವಾದ ಚಿತ್ರ. ಮಕ್ಕಳು ಹೆತ್ತವರು ಮಾತ್ರವಲ್ಲದೆ ಶಿಕ್ಷಣ ಅಧಿಕಾರಿಗಳೆಲ್ಲರು, ಪ್ರತಿ ರಾಜಕಾರಣಿಗಳು ಈ ಚಿತ್ರವನ್ನು ನೋಡಬೇಕು. ಚಿತ್ರದ ಮೂಲಕ ಮಕ್ಕಳ ವ್ಯವಸ್ಥಿತ ಜೀವನ ಬದಲಾಯಿಸುವ ಒಂದು ಗುರಿಯನ್ನು ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ.


ಪೆನ್ಸಿಲ್ ಬಾಕ್ಸ್ ಮೀರಿಸುವ ಪ್ರೊಡಕ್ಷನ್ ಸ್ಕೂಲ್ ಲೀಡರ್:
ಉದ್ಯಮಿ ದಯಾನಂದ ರೈ ಬೆಟ್ಟಂಪಾಡಿ ಅವರು ಮಾತನಾಡಿ ನಾವು ನಮ್ಮಮಟ್ಟಿಗೆ ಎಷ್ಟು ಸಾಧ್ಯವೋ ಅಷ್ಟು ಚಿತ್ರವನ್ನು ಮಾಡುವಲ್ಲಿ ಪ್ರಯತ್ನ ಮಾಡಿದ್ದೇವೆ. ಇದನ್ನು ಪ್ರೇಕ್ಷಕರು ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದ ಅವರು ಪೆನ್ಸಿಲ್ ಬಾಕ್ಸ್ ಚಲನ ಚಿತ್ರಕ್ಕೂ ಮೀರುವಂತಹ ಪ್ರೊಡಕ್ಷನ್ ಸ್ಕೂಲ್ ಲೀಡರ್‌ನಲ್ಲಿದೆ ಎಂದರು. ಚಿತ್ರ ನಾಯಕ ನಟಿ ದೀಕ್ಷಾ ಡಿ ರೈ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಪದ್ಮನಾಭ ರೈ, ಸಂಗೀತ ನಿರ್ದೇಶಕ ಪ್ರಸಾದ್ ಎ ಶೆಟ್ಟಿ, ಭಾರತ್ ಸಿನೇಮಾಸ್‌ನ ಮ್ಯಾನೇಜರ್ ಜಯರಾಮ್, ಆಮಂತ್ರಣ ಪರಿವಾಳ ಅಳದಂಗಡಿಯ ವಿಜಯ ಕುಮಾರ್ ಜೈನ್, ಉದ್ಯಮಿ ನಾಗೇಶ್ ರೈ ಬೆಟ್ಟಂಪಾಡಿ, ಧರ್ಮಛಾವಡಿ ಇದರ ನಾಯಕ ನಟ ರವಿ ಸಾಲಿಯಾನ್, ಧರ್ಮದೈವ ಚಿತ್ರದ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ, ಸಚಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರಿನ ಪದ್ಮರಾಜ್ ಕಾರ್ಯಕ್ರಮ ನಿರೂಪಿಸಿದರು. ಚಿತ್ರದ ಹಂಚಿಕೆದಾರ ಬಾಲಕೃಷ್ಣ ಶೆಟ್ಟಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.


LEAVE A REPLY

Please enter your comment!
Please enter your name here