ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ನೆಲೆಯಲ್ಲಿ 34 ನೇ ನೆಕ್ಕಿಲಾಡಿ ಗ್ರಾಮದಲ್ಲಿ ಹೊಸದಾಗಿ ಅಳವಡಿಸಿರುವ ವಿದ್ಯುತ್ ಕಂಬದ ಬುಡ ದುರ್ಬಲವಾದಂತಿದ್ದು, ಅಪಾಯಕಾರಿಯಾಗಿ ನಿಂತಿರುವ ಬಗ್ಗೆ ಸ್ಥಳೀಯ ನಾಗರಿಕರು ಕಳವಳ ವ್ಯಕ್ತಪಡಿಸಿದ್ದಾರೆ.
ನೆಕ್ಕಿಲಾಡಿಯ ಶ್ರೀ ರಾಘವೇಂದ್ರ ಮಠದ ಬಳಿ ಈ ಹಿಂದೆ ಸ್ಥಾಪಿಸಿರುವ ಈ ಬೃಹತ್ ವಿದ್ಯುತ್ ಕಂಬದ ಬುಡದ ಸುತ್ತ ಒಂದಷ್ಟು ಮಣ್ಣು ಉಳಿಸಿ ಉಳಿದೆಲ್ಲಾ ಭಾಗದಲ್ಲಿ ಮಣ್ಣನ್ನು ತೆರವುಗೊಳಿಸಲಾಗಿದ್ದು,. ಇದರಿಂದಾಗಿ ವಿದ್ಯುತ್ ಕಂಬದ ಬುಡವೇ ಮಳೆಗಾಲದಲ್ಲಿ ಸಡಿಲಗೊಂಡು ವಿದ್ಯುತ್ ಕಂಬ ಅಪಾಯಕಾರಿಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಂಬಂಧಿತ ವಿಭಾಗ ವಿದ್ಯುತ್ ಕಂಬದ ಸುರಕ್ಷತೆಯ ಕಡೆಗೆ ಗಮನ ಹರಿಸಬೇಕಾಗಿದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ.