ಪುತ್ತೂರು: ನಿರಂತರ ಮಳೆಗೆ ಬನ್ನೂರು ಕರ್ಮಲದಲ್ಲಿ ದುರಸ್ಥಿಯಂಚಿನಲ್ಲಿರುವ ಕಟ್ಟಡವೊಂದು ಕುಸಿಯುವ ಭೀತಿಯಲ್ಲಿದ್ದು, ಅದರ ಪಕ್ಕದಲ್ಲಿರುವ ಮನೆಗೆ ಅಪಾಯ ಆಗುವ ಸಾಧ್ಯತೆ ಇದೆ.

ಬನ್ನೂರು ಕರ್ಮಲದಲ್ಲಿರುವ ಪಂಚಾಕ್ಷರಿ ಲೈಟಿಂಗ್ಸ್ನ ಮಾಲಕ ಗಣೇಶ್ ಎಂಬವರ ಮನೆಗೆ ಅಪಾಯದಲ್ಲಿದೆ. ಅವರ ಮನೆಯ ಮುಂದಿನ ಧರೆಯ ಮೇಲಿರುವ ಕಟ್ಟಡವೊಂದರ ದುರಸ್ಥಿ ಕಾರ್ಯ ನಡೆಯುತ್ತಿದ್ದು, ಕಟ್ಟಡದ ಗೋಡೆಯ ಒಂದು ಭಾಗ ಕುಸಿದಿದೆ. ಮತ್ತೊಂದು ಭಾಗ ಬಾಗಿ ಗಣೇಶ್ ಅವರ ಮನೆ ಬೀಳುವ ಸ್ಥಿತಿಯಲ್ಲಿದೆ. ಸದ್ಯಕ್ಕೆ ಕುಸಿಯುವ ಭೀತಿಯಲ್ಲಿರುವ ಕಟ್ಟಡಕ್ಕೆ ಎರಡು ಕಬ್ಬಿಣದ ಪೈಪ್ಗಳನ್ನು ಆಧಾರ ಸ್ಥಂಭವಾಗಿ ನೀಡಲಾಗಿದೆಯಾದರೂ ಅಪಾಯ ಕಟ್ಟಿಟ್ಟ ಬುತ್ತಿ.ಮನೆಯವರು ರಾತ್ರಿ ನಿದ್ದೆ ಬಿಟ್ಟು ಜಾಗರಣೆ ಮಾಡುವ ಪರಿಸ್ಥಿತಿ ಎದುರಾಗಿದೆ. ಅಪಾಯ ಸಂಭವಿಸುವ ಮೊದಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುವಂತೆ ಗಣೇಶ್ ಅವರು ಮನವಿ ಮಾಡಿದ್ದಾರೆ.