ಪುತ್ತೂರು: ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಶಾಂತಿಗೋಡು ಗ್ರಾಮದ ಅರ್ತಿಕೆರೆ ಎಂಬಲ್ಲಿ ರಫೀಕ್ ಅರ್ತಿಕೆರೆ, ಅಬ್ಬಾಸ್ ಅರ್ತಿಕೆರೆ, ಇಬ್ರಾಹಿಂ ಅರ್ತಿಕೆರೆ, ಇಬ್ರಾಹಿಂ ಹಾಜಿ ಅರ್ತಿಕೆರೆ, ರಂಗಪ್ಪ ಪೂಜಾರಿಯವರ ಅಡಿಕೆ ತೋಟಕ್ಕೆ ನೀರು ನುಗ್ಗಿದ್ದು, ಅಪಾರ ನಷ್ಟ ಉಂಟಾಗಿದೆ.

ಅಬ್ದುಲ್ ರಹಿಮಾನ್ ಎಂಬವರಿಗೆ ಸೇರಿದ ಮನೆಯ ಹಿಂಭಾಗದ ಗುಡ್ಡ ಕುಸಿದಿದ್ದು, ಮನೆಗೆ ಹಾನಿಯುಂಟಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.