ಪುತ್ತೂರು: ಮಳೆಯ ನಡುವೆಯೂ ಕಾಡಾನೆ ಉಪಟಳ ಮುಂದುವರಿದಿದೆ.

ಮಾಡನ್ನೂರು ಗ್ರಾಮದ ಪೂವಂದೂರು ಕಮಲಾಕ್ಷ ಬೋರ್ಕರ್ ಎಂಬವರ ಕೃಷಿ ತೋಟಕ್ಕೆ ನುಗ್ಗಿದ ಕಾಡಾನೆ ಕೃಷಿ ಹಾನಿ ಮಾಡಿದೆ. ತೋಟದಲ್ಲಿದ್ದ ಅಡಕೆ,ಬಾಳೆಗಿಡಗಳನ್ನು ಹಾಗೂ ತೆಂಗಿನ ಸಸಿ ನಾಶ ಮಾಡಿ ಅಪಾರ ಪ್ರಮಾಣದ ಕೃಷಿ ಹಾನಿ ಮಾಡಿರುವುದಾಗಿ ವರದಿಯಾಗಿದೆ.
ಆನೆಯನ್ನು ಓಡಿಸುವ ಇಟಿಫ್ ತಂಡ ಆಗಮಿಸಿ ಎರಡು ದಿನ ಹುಡುಕಾಟ ನಡೆಸಿ ತೆರಳಿದ್ದು, ಇದೀಗ ಕಾಡಾನೆ ಮತ್ತೆ ದಾಳಿ ನಡೆಸಿದ್ದು, ಇಟಿಫ್ ತಂಡ ಎಲ್ಲಿದೆ ಹೋಗಿದೆ. ಕೃಷಿಗೆ ಆಗಿರುವ ಹಾನಿಯ ನಷ್ಟವನ್ನು ನೀಡುವವರು ಯಾರು ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.