ಪುತ್ತೂರು: ಕೆಯ್ಯೂರು ಗ್ರಾಮದ ಪಾತುಂಜ ಎಂಬಲ್ಲಿ ಅಬ್ದುಲ್ ಖಾದರ್ ಎಂಬವರ ಮನೆಯ ಮೇಲ್ಛಾವಣಿಯು ಗಾಳಿಗೆ ಕುಸಿತಗೊಂಡು ಅಪಾರ ನಷ್ಟ ಉಂಟಾಗಿದೆ. ಮನೆಯ ಮಾಡಿನ ಪಕ್ಕಾಸುಗಳು ಮುರಿತುಗೊಂಡಿದ್ದು ಹಂಚುಗಳು ಬಿದ್ದು ಒಡೆದು ಹೋಗಿವೆ. ಸ್ಥಳಕ್ಕೆ ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.