ಒಳಮೊಗ್ರು ಬಿಜೆಪಿ ಶಕ್ತಿಕೇಂದ್ರದ ಪ್ರಮುಖ್ ಮಾಧವ ರೈ ಕುಂಬ್ರರವರಿಗೆ ಶ್ರದ್ಧಾಂಜಲಿ ಸಭೆ

0

ಓರ್ವ ನಗುಮೊಗದ ಸರಳ ಸಜ್ಜನಿಕೆಯ ಪ್ರಾಮಾಣಿಕ ಕಾರ್ಯಕರ್ತ: ಸಂಜೀವ ಮಠಂದೂರು

ಪುತ್ತೂರು: ಭಾರತೀಯ ಜನತಾ ಪಾರ್ಟಿಯ ಓರ್ವ ದೇವ ದುರ್ಲಭ ಕಾರ್ಯಕರ್ತರಾಗಿ ದುಡಿದು ಬೂತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಶಕ್ತಿಕೇಂದ್ರದ ಪ್ರಮುಖ್‌ರಾಗಿ ತನ್ನ ಜೀವನವನ್ನೇ ಪಕ್ಷ ಸಂಘಟನೆಗಾಗಿ ಮುಡುಪಾಗಿಸಿದ ಎಸ್.ಮಾಧವ ರೈ ಕುಂಬ್ರರವರು ಓರ್ವ ಸರಳ ಸಜ್ಜನಿಕೆಯ ನಗುಮೊಗದ ಪ್ರಾಮಾಣಿಕ ಕಾರ್ಯಕರ್ತರಾಗಿದ್ದರು ಎಂದು ಮಾಜಿ ಶಾಸಕ ಸಂಜೀವ ಮಠಂದೂರುರವರು ಹೇಳಿದರು.

ಅವರು ಭಾರತೀಯ ಜನತಾ ಪಾರ್ಟಿ ಒಳಮೊಗ್ರು ಇದರ ವತಿಯಿಂದ ಎಸ್.ಮಾಧವ ರೈಯವರಿಗೆ ಮೇ.31ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿ ಮಾತನಾಡಿದರು. ರಾಜಕೀಯವಲ್ಲದೆ ಧಾರ್ಮಿಕ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಇವರು ಹಲವು ಸಾನ್ನಿಧ್ಯಗಳ ಅಭಿವೃದ್ದಿಯಲ್ಲೂ ಕೈ ಜೋಡಿಸಿದ್ದಾರೆ ಎಂದ ಮಠಂದೂರುರವರು ಪರರ ನೋವಿಗೆ ಸ್ಪಂದಿಸುತ್ತಿದ್ದ ಮಾಧವ ರೈಯವರು ಎಲ್ಲರೊ೦ದಿಗೆ ಸ್ನೇಹಜೀವಿಯಾಗಿ ಬದುಕು ಕಟ್ಟಿಕೊಂಡಿದ್ದರು. ಇಂತಹ ಒಂದು ಮೇರು ವ್ಯಕ್ತಿತ್ವ ನಮ್ಮಿಂದ ಕಣ್ಮರೆಯಾಗಿದೆ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು.


ಬಿಜೆಪಿಯ ಹಿರಿಯ ಮುಖಂಡ, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಮಾತನಾಡಿ, ಮಾಧವ ರೈಯವರು ಪಕ್ಷಕ್ಕಾಗಿ ಮಾಡಿದ ಕೆಲಸ ಕಾರ್ಯಗಳು ಸದಾ ಸ್ಮರಣೀಯ.ಅವರ ಅಗಲಿಕೆ ಪಕ್ಷಕ್ಕೆ ದೊಡ್ಡ ನಷ್ಟವನ್ನು ತಂದಿದೆ. ಬಿಜೆಪಿ ಎಂದರೆ ಒಂದು ಕುಟುಂಬ. ಇಂದು ನಾವುಗಳ ಅವರ ಕುಟುಂಬದ ಜೊತೆ ನಿಲ್ಲಬೇಕಾಗಿದೆ. ನಮ್ಮಿಂದ ಸಾಧ್ಯವಾಗುವ ಎಲ್ಲಾ ರೀತಿಯ ಸಹಾಯವನ್ನು ಮಾಡಬೇಕಾಗಿದೆ ಎಂದ ಅವರು ಅಗಲಿದ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಎಂದು ಹೇಳಿ ಪ್ರಾರ್ಥಿಸಿದರು. ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ, ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಮಾಧವ ರೈಯವರ ನಿಧನ ಬಹಳಷ್ಟು ನೋವು ತಂದಿದೆ. ಎಲ್ಲರಿಗೂ ಬೇಕಾದ ಓರ್ವ ವ್ಯಕ್ತಿಯಾಗಿದ್ದರು. ರಾಜಕೀಯದೊಂದಿಗೆ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಇಂತಹ ಒಬ್ಬ ಸಜ್ಜನ ವ್ಯಕ್ತಿ ನಮ್ಮಿಂದ ದೂರವಾಗಿದ್ದಾರೆ. ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು. ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಯಾರ ಮನಸ್ಸನ್ನು ನೋಯಿಸದ ವ್ಯಕ್ತಿತ್ವವನ್ನು ಹೊಂದಿದ್ದ ಮಾಧವ ರೈಯವರ ತಮ್ಮ ಜೀವನದಲ್ಲಿ ಶಿಸ್ತು,ತಾಳ್ಮೆ,ಪ್ರಾಮಾಣಿಕತೆ ಮತ್ತು ನಗುವನ್ನು ಅಳವಡಿಸಿಕೊಂಡಿದ್ದರು. ಅವರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟವನ್ನು ತಂದಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸುವುದರೊಂದಿಗೆ ಅವರ ಸಂಸಾರಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಕೊಡಲಿ ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು.

ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಮಾತನಾಡಿ, ಮಾಧವ ರೈಯವರ ವ್ಯಕ್ತಿತ್ವವೇ ಬಹಳ ವಿಶೇಷವಾಗಿತ್ತು. ಅವರಿಗೆ ಕೋಪ ಎಂಬುದೇ ಬರುತ್ತಿರಲಿಲ್ಲ ಅಷ್ಟೊಂದು ತಾಳ್ಮೆಯಿಂದ ವರ್ತಿಸುತ್ತಿದ್ದರು. ಇದು ಎಲ್ಲರಿಗೂ ಸಾಧ್ಯವಿಲ್ಲ. ಇಂತಹ ಮೇರು ವ್ಯಕ್ವಿತ್ವ ಇವರದ್ದಾಗಿತ್ತು. ರಾಜಕೀಯದೊಂದಿಗೆ ಧಾರ್ಮಿಕವಾಗಿಯೂ ತೊಡಗಿಸಿಕೊಂಡಿದ್ದ ಇವರು ಸನಾತನ ಧರ್ಮವನ್ನು ಬಹಳಷ್ಟು ಇಷ್ಟಪಟ್ಟಿದ್ದರು ಮತ್ತು ಅದರಂತೆ ಬದುಕಿ ತೋರಿಸಿದ್ದರು. ಇಂತಹ ಒಬ್ಬ ಸರಳ ಸಜ್ಜನ ವ್ಯಕ್ತಿಯನ್ನು ಕಳೆದುಕೊಂಡಿದ್ದು ಬಹಳಷ್ಟು ದುಃಖ ತಂದಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸುವುದರೊಂದಿಗೆ ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಕೊಡಲಿ ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು. ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರು ಮಾತನಾಡಿ, ಹುಟ್ಟು ಸಾವು ಮನುಷ್ಯನ ಜೀವನದಲ್ಲಿ ಸಹಜ ಆದರೆ ಮಾಧವ ರೈಯಂತವರ ನಿಧನವು ಬಹಳಷ್ಟು ಬೇಸರನ್ನು ತರುತ್ತದೆ. ಯಾಕೆಂದರೆ ಅವರ ವ್ಯಕ್ತಿತ್ವವೇ ಅಂತಹುದು ಆಗಿತ್ತು. ಪಕ್ಷಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಸಿಕೊಂಡು ಸೇವೆ ಮಾಡಿದವರು. ದೇಹ ದೂರವಾದರೂ ಅವರು ಮಾಡಿದ ಸೇವೆ ಸದಾ ಸ್ಮರಣೀಯ. ಪಕ್ಷ ಸದಾ ಅವರ ಕುಟುಂಬದೊಂದಿಗೆ ಇದೆ ಎಂಬ ಮಾತನ್ನು ಹೇಳುತ್ತಾ ಶ್ರದ್ಧಾಂಜಲಿ ಅರ್ಪಿಸಿದರು. ಬಿಜೆಪಿ ಗ್ರಾಮಾಂತರ ಮಂಡಲ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ, ಮಾಧವ ರೈಯವರು ಪಕ್ಷಕ್ಕಾಗಿ ಮಾಡಿದ ಸೇವೆ, ತ್ಯಾಗವನ್ನು ಪಕ್ಷ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ದೂರವಾದರೂ ಅವರು ಮಾಡಿದ ಸೇವೆ, ಕಾರ್ಯಗಳು ಸ್ಮರಣೀಯ ಎಂದು ಹೇಳಿ ನುಡಿ ನಮನ ಸಲ್ಲಿಸಿದರು. ಒಳಮೊಗ್ರು ಗ್ರಾಪಂ ಮಾಜಿ ಸದಸ್ಯೆ ಉಷಾ ನಾರಾಯಣ್‌ರವರು ಮಾತನಾಡಿ, ಮಾಧವ ರೈಯವರು ಎಲ್ಲರೊಂದಿಗೆ ನಗುಮೊಗದಿಂದ ಬೆರೆಯುತ್ತಿದ್ದ ಓರ್ವ ಸ್ನೇಹಜೀವಿಯಾಗಿದ್ದರು. ಮಾತು, ಕೃತಿ ಎರಡಲ್ಲೂ ಯಾರಿಗೂ ಒಂದಿಷ್ಟು ನೋವು ಕೊಡದ ಇವರು ಎಲ್ಲರೊಂದಿಗೆ ಆತ್ಮೀಯವಾಗಿ ಇದ್ದರು. ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಎಂದು ಹೇಳಿ ನುಡಿ ನಮನ ಸಲ್ಲಿಸಿದರು. ಬಿಜೆಪಿ ಪ್ರಬುದ್ಧರ ಪ್ರಕೋಷ್ಟಕ ಜಿಲ್ಲಾ ಸಮಿತಿಯ ಸದಸ್ಯ ಸುಧಾಕರ ರೈ ಕುಂಬ್ರರವರು ಮಾಧವ ರೈಯವರ ಜೀವನದ ಬಗ್ಗೆ ಮಾತನಾಡಿ ನುಡಿ ನಮನ ಸಲ್ಲಿಸಿದರು.


ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಕಾರ್ಯದರ್ಶಿಗಳಾದ ಪುನೀತ್ ಮಾಡಂತಾರು, ಕಾರ್ಯದರ್ಶಿ ರತನ್ ರೈ ಕುಂಬ್ರ, ಸೌಮ್ಯ ಬಾಲಸುಬ್ರಹ್ಮಣ್ಯ, ನಗರ ಮಂಡಲ ಕಾರ್ಯದರ್ಶಿ ಮಣಿಕಂಠ, ನೆ.ಮುಡ್ನೂರು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಕಾರ್ಯದರ್ಶಿ ಲೋಕೇಶ್ ಚಾಕೋಟೆ, ಉದ್ಯಮಿ ಕುಂಬ್ರ ಮೋಹನದಾಸ ರೈ , ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ ಮಣಿಯಾಣಿ, ಎಸ್.ಟಿ ಮೋರ್ಛಾ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ, ಒಳಮೊಗ್ರು ಗ್ರಾಪಂ ಸದಸ್ಯರುಗಳಾದ ಮಹೇಶ್ ರೈ ಕೇರಿ, ಪ್ರದೀಪ್, ರೇಖಾ ಯತೀಶ್, ಕೃಷಿಪತ್ತಿನ ಸಂಘದ ನಿರ್ದೇಶಕರುಗಳಾದ ಶಿವರಾಮ ಗೌಡ, ಶ್ರೀನಿವಾಸ ಪ್ರಸಾದ್ ಮುಡಾಲ, ಯುವ ಮೋರ್ಛಾದ ಸುನೀತ್ ಭಟ್, ಅರಿಯಡ್ಕ ಗ್ರಾಪಂ ಮಾಜಿ ಸದಸ್ಯ ತಿಲಕ್ ರೈ ಕುತ್ಯಾಡಿ, ಬೂತ್ ಅಧ್ಯಕ್ಷರುಗಳಾದ ಅರುಣ್ ರೈ ಬಿಜಳ, ರಮೇಶ್ ರೈ ನೀರ್ಪಾಡಿ, ಕಾರ್ಯದರ್ಶಿಗಳಾದ ಸತೀಶ್ ರೈ ನೀರ್ಪಾಡಿ, ಸಂಜೀವ ಬೊಳ್ಳಾಡಿ, ಅನಿಲ್ ರೈ ಬಾರಿಕೆ, ಅರಿಯಡ್ಕ ಗ್ರಾಪಂ ಸದಸ್ಯೆ ಭಾರತಿ ರೈ, ಕಟ್ಟಡ ಕಾರ್ಮಿಕರ ಸಂಘದ ವಲಯ ಅಧ್ಯಕ್ಷ ಪುರಂದರ ಶೆಟ್ಟಿ ಮುಡಾಲ, ಪ್ರಮುಖರಾದ ರಾಮಯ್ಯ ಗೌಡ ಬೊಳ್ಳಾಡಿ, ಕರುಣಾಕರ ಗೌಡ ಎಲಿಯ, ನಾರಾಯಣ ಪೂಜಾರಿ ಕುರಿಕ್ಕಾರ, ಶರತ್ ಗುತ್ತು, ಕರುಣಾಕರ ಬಿಜಳ, ರಾಧಾಕೃಷ್ಣ ಶೆಟ್ಟಿ ಕಲ್ಲಡ್ಕ, ನಾರಾಯಣ ಆಚಾರ್ಯ, ನಾಗೇಂದ್ರ ಬಾಳಿಗ, ಮಾಧವ ರೈಯವರ ಸಹೋದರಿ ರೇವತಿ ಸಹಿತ ಹಲವು ಮಂದಿ ಗಣ್ಯರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಟೆಲಿಕಾಂ ಸಮಿತಿಯ ಜಿಲ್ಲಾ ಸದಸ್ಯ, ಬಿಜೆಪಿ ಗ್ರಾಮಾಂತರ ಮಂಡಲ ಮಾಜಿ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನವರು ಸ್ವಾಗತದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಾಧವ ರೈಯವರು ಭಾರತೀಯ ಜನತಾ ಪಾರ್ಟಿಯ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಎಲ್ಲರೊಂದಿಗೆ ಆತ್ಮೀಯವಾಗಿ ನಗುಮೊಗದಿಂಧಲೇ ಬೆರೆಯುತ್ತಿದ್ದ ಓರ್ವ ಅಜಾತಶತ್ರುವಾಗಿದ್ದಾರೆ. ಅವರ ನೆನಪು ಸದಾ ಅಮರ, ಅವರು ಪಕ್ಷಕ್ಕಾಗಿ ಮಾಡಿದ ಸೇವೆ ಸ್ಮರಣೀಯ ಎಂದು ಹೇಳಿ ನುಡಿ ನಮನ ಸಲ್ಲಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಸ್.ಮಾಧವ ರೈಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.

LEAVE A REPLY

Please enter your comment!
Please enter your name here