ಪುತ್ತೂರು: ಸಾಮಾಜಿಕ ಮುಂದಾಳು ಸುಧಾಕರ್ ರೈ ಕುಂಜಾಡಿರವರ ಪಾಲ್ತಾಡಿ ಗ್ರಾಮದ ಕುಂಜಾಡಿ ಮನೆಯ ಹತ್ತಿರ ಮೇ.30 ರಂದು ರಾತ್ರಿ ಗುಡ್ಡ ಕುಸಿತ ಸಂಭವಿಸಿದ್ದು, ಈ ಗುಡ್ಡ ಕುಸಿತದಿಂದ ಸುಮಾರು 3 ಲಕ್ಷ ರೂ, ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಕಳೆದ ಎರಡು ವರ್ಷಗಳಿಂದ ಗುಡ್ಡ ಕುಸಿತ ಸಂಭವಿಸಿದರಿಂದ, ಮನೆಗೆ ಅಪಾಯ ಇರುವುದನ್ನು ಅರಿತು, ಸುಧಾಕರ್ ರೈ ಕುಂಜಾಡಿ ಮತ್ತು ಮನೆಯವರು ಪುತ್ತೂರು ದರ್ಬೆಯಲ್ಲಿ ವಾಸವಾಗಿದ್ದಾರೆ.