ಪುತ್ತೂರು: ಬೆಟ್ಟಂಪಾಡಿ ಗ್ರಾಮದ ತಲೆಪ್ಪಾಡಿ ಕಲ್ಲಗದ್ದೆ ನಿವಾಸಿ ಜಗದೀಶ್ ಶೆಟ್ಟಿ(58ವ.)ರವರು ಅಸೌಖ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಮೇ.30ರಂದು ನಿಧನ ಹೊಂದಿದ್ದಾರೆ.
ಬೆಟ್ಟಂಪಾಡಿ ಗುತ್ತುವಿನಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಇವರು ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದರು. ಮೃತರು ಪತ್ನಿ ಹೇಮಲತ, ಪುತ್ರ ನಿಶಾಂತ್ ಹಾಗೂ ಪುತ್ರಿ ನಿಶಿತರವರನ್ನು ಅಗಲಿದ್ದಾರೆ.