ನಿಡ್ಪಳ್ಳಿ ಒಕ್ಕೂಟದ ತ್ರೈಮಾಸಿಕ ಸಭೆ

0

ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ನಿಡ್ಪಳ್ಳಿ ಒಕ್ಕೂಟದ ತ್ರೈಮಾಸಿಕ ಸಭೆ ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ ಪಾಟಾಳಿ ಬಡಕಾಯೂರು ಇವರ ಅಧ್ಯಕ್ಷತೆಯಲ್ಲಿ ಜೂ.1ರಂದು ನಿಡ್ಪಳ್ಳಿ ಶಾಲೆಯಲ್ಲಿ ನಡೆಯಿತು.

ಬೆಟ್ಟಂಪಾಡಿ ವಲಯದ ಮೆಲ್ವೀಚಾರಕ ಸೋಹನ್ ಜಿ ಮಾತನಾಡಿ, ಯೋಜನೆಯ ಸಾಲದ ಪರಿಷ್ಕೃತ ಬಡ್ಡಿ ದರ ಮತ್ತು ವಿನಿಯೋಗದಾರ ಬಗ್ಗೆ ಮತ್ತು ಸಂಘದ ಸಭೆ ಕ್ರಮವತ್ತಾಗಿ ನಡೆಸುವ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ರೆಂಜ ಸೇವಾ ಕೇಂದ್ರದ ವಿ.ಎಲ್.ಇ ಕುಸುಮರವರು ಮಾತನಾಡಿ ಸೇವಾ ಕೇಂದ್ರದಲ್ಲಿ ಜನರಿಗೆ ಸಿಗುವ ವಿವಿಧ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಒಕ್ಕೂಟದ ಸೇವಾ ಪ್ರತಿನಿಧಿ ಶಾಲಿನಿ.ಕೆ, ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ.ಕೆ,  ಕೋಶಾಧಿಕಾರಿ ತಿಮ್ಮಪ್ಪ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ಸವಿತಾ.ಕೆ ಸ್ವಾಗತಿಸಿ, ಒಕ್ಕೂಟದ ಜತೆ ಕಾರ್ಯದರ್ಶಿ ಹೇಮಾ ಸಿ.ಎಚ್ ಒಕ್ಕೂಟದ ವರದಿ ವಾಚಿಸಿ ವಂದಿಸಿದರು.ಒಕ್ಕೂಟದ ಸದಸ್ಯರು ಪಾಲ್ಗೊಂಡರು. 

LEAVE A REPLY

Please enter your comment!
Please enter your name here