ಕೊೖಲ: ಅಪಾಯಕಾರಿ ಸ್ಥಿತಿಯಲ್ಲಿದ್ದ ಮನೆಯಿಂದ ಸಾಮಾಗ್ರಿಗಳ ಸ್ಥಳಾಂತರಕ್ಕೆ ವಿಖಾಯ ಸದಸ್ಯರ ನೆರವು

0


ರಾಮಕುಂಜ: ಭಾರೀ ಮಳೆಗೆ ಕೊಯಿಲ ಗ್ರಾ.ಪಂ. ಕುಡಿಯುವ ನೀರಿನ ಟ್ಯಾಂಕ್ ಬಳಿಯ ಗುಡ್ಡ ಕುಸಿದ ಪರಿಣಾಮ ಇಲ್ಲಿನ ಮನೆಯೊಂದು ಅಪಾಯಕಾರಿ ಸ್ಥಿತಿಯಲ್ಲಿತ್ತು. ಈ ಹಿನ್ನಲೆಯಲ್ಲಿ ಈ ಮನೆಯಲ್ಲಿದ್ದ ಸಾಮಾಗ್ರಿಗಳನ್ನು ಎಸ್‌ಕೆಎಸ್‌ಎಸ್‌ಎಫ್ ಆತೂರು ಕ್ಲಸ್ಟರ್‌ನ ಅಧ್ಯಕ್ಷ ಎನ್.ಸಿದ್ದಿಕ್‌ರವರ ನೇತೃತ್ವದಲ್ಲಿ ಎಸ್‌ಕೆಎಸ್‌ಎಸ್‌ಎಫ್ ಆತೂರು ಕ್ಲಸ್ಟರ್‌ನ ವಿಖಾಯ ಸದಸ್ಯರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಲು ಸಹಕರಿಸಿದರು.

ಝಕರಿಯಾ ಮುಸ್ಲಿಯಾರ್, ನಾಸೀರ್ ಮರೋಡಿ, ಜಿಯಾ, ಆಸೀಫ್ ಗಂಡಿಬಾಗಿಲು, ಪುತ್ತುಕುಂಞಿ, ಹನೀಫ್, ಪತ್ರಕರ್ತ ನಝೀರ್ ಕೊಯಿಲ, ಮಾಶೋದ್ ಗಂಡಿಬಾಗಿಲು ಮತ್ತಿತರರು ಸಹಕರಿಸಿದರು. ಈ ಸಂದರ್ಭ ಕೊಯಿಲ ಗ್ರಾ.ಪಂ.ನ ಅಧ್ಯಕ್ಷರು, ಸದಸ್ಯರು, ಗ್ರಾಮ ಆಡಳಿತಾಧಿಕಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here