ಪುತ್ತೂರಿನ ಶ್ರೀ ಮಂಜುನಾಥೇಶ್ವರ ಎಲೆಕ್ಟ್ರಾನಿಕ್ಸ್, ಫರ್ನಿಚರ್ ಸಂಸ್ಥೆಯಲ್ಲಿ ಉಚಿತ ಕೂಪನ್ ನ ಡ್ರಾ

0

ಪುತ್ತೂರು: ಪುತ್ತೂರು ಇಲ್ಲಿನ ದರ್ಬೆ ಪ್ರಶಾಂತ್ ಮಹಲ್ ನಲ್ಲಿ ವ್ಯವಹಾರ ನಡೆಸುತ್ತಿದ್ದ ಶ್ರೀ ಮಂಜುನಾಥೇಶ್ವರ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ ಸಂಸ್ಥೆಯಲ್ಲಿ ವರ್ಷಾಚರಣೆ ಪ್ರಯುಕ್ತ ರೂ. 2000 ಕ್ಕಿಂತ ಮೇಲ್ಪಟ್ಟು ಐಟಂ ಖರೀದಿ ಮಾಡಿದವರಿಗೆ ನೀಡಲಾದ ಉಚಿತ ಕೂಪನ್ ನ ಡ್ರಾ ಸಂಸ್ಥೆಯಲ್ಲಿ ನಡೆಯಿತು.

ದರ್ಬೆ ಆಸ್ತೆಟಿಕ್ ಡೆಂಟಲ್ ಕ್ಲಿನಿಕ್ ನ ವೈದ್ಯರಾದ ಡಾ. ಕೃತಿಕಾ,, ಉದ್ಯಮಿ ವಾಮನ ಪೈ, ಶ್ರೀ ಸಾಯಿ ಮೆಡಿಕಲ್ ನ ಮಾಲಕರಾದ ಶೈಲೇಶ್ , ಮಾಸ್ಟರ್ ಬೇಕ್ ನ ಮಾಲಕರಾದ ರಾಜೇಶ್ ಕುಮಾರ್, ಪ್ರಶಾಂತ್ ಮಹಲ್ ನ ಸಿಬ್ಬಂದಿಗಳಾದ ರಾಮಣ್ಣ ಗೌಡ, ಮೋನಪ್ಪ, ಎಲ್.ಐ. ಸಿ.ಯ ನಿವೃತ್ತ ಶಾಖಾ ವ್ಯವಸ್ಥಾಪಕರದ ರವೀಂದ್ರನಾಥ ಪಡೀಲ್, ಉದ್ಯಮಿ ಪದ್ಮನಾಭ ನಾಯಕ್ ಪಡೀಲ್ , ಪೋಸ್ಟ್ ಮಾಸ್ಟರ್ ಲಕ್ಷ್ಮಣ, ಪ್ರಮುಖರಾದ ಭವಿತ್, ಜೆ.ಆರ್. ಎಂಟರ್ ಪ್ರೈಸಸ್ ನ ಮಾಲಕರಾದ ಜಯರಾಜ್ ಪೂಜಾರಿ, ಸಂಸ್ಥೆಯ ಮಾಲಕರ ಪತ್ನಿ ರಶ್ಮಿ ಮಂಜುನಾಥ, ಸಿಬ್ಬಂದಿಗಳಾದ ಪ್ರಮೀಳ, ಧನ್ಯ, ಸ್ವಸ್ತಿಕ್, ಶೋಧನ್ , ಸದಾಶಿವ, ಶರತ್ , ದಿವಾಕರ, ಅಶ್ವಿನಿ, ವಿಘ್ನೇಶ್ ಮೊದಲಾವರು ಉಪಸ್ಥಿತರಿದ್ದರು.


ಸಂಸ್ಥೆಯ ಮಾಲಕರಾದ ಮಂಜುನಾಥ ರವರು ಸ್ವಾಗತಿಸಿ ವಂದಿಸಿದರು‌. ವರ್ಷಾಚರಣೆ ಪ್ರಯುಕ್ತ ರೂ 2000ಕ್ಕಿಂತ ಮೇಲ್ಪಟ್ಟು ಖರೀದಿ ಮಾಡಿದವರಿಗೆ ಉಚಿತ ಕೂಪನ್ ನೀಡಲಾಗಿತ್ತು. ಈ ಪೈಕಿ ಹನ್ನೊಂದು ಮಂದಿ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here