ವಿಟ್ಲ: 36 ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಇಡ್ಕಿದು ಸೇವಾ ಸಹಕಾರಿ ಸಂಘದ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ಯಸ್ ರವರ ಬೀಳ್ಕೊಡುಗೆ ಕಾರ್ಯಕ್ರಮವು ಸಂಘದ ಕಬಕ ಅಡ್ಯಾಲುಕರೆ ಶಾಖೆಯ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಬೀಡಿನ ಮಜಲು, ಉಪಾಧ್ಯಕ್ಷರಾದ ಯನ್.ರಾಮಭಟ್, ನಿರ್ದೇಶಕರಾದ ಚಂದ್ರಹಾಸ, ನವೀನ್, ಲೋಹಿತಾಶ್ವ ಎಂ., ಉಮೇಶ್ ಗೌಡ, ಜಯಂತ ಕಂಪ, ಆನಂದ ಅಡ್ಯಾಲು, ಪದ್ಮಾವತಿ, ವಿದ್ಯಾ ವಿ, ಸತೀಶ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಂಘದ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಲಿರುವ ರವೀಂದ್ರನಾಥ ಮೆಲಾಂಟರವರನ್ನು ಸ್ವಾಗತಿಸಲಾಯಿತು. ಸಿಬ್ಬಂದಿ ಈಶ್ವರ ಎಂ. ಕಾರ್ಯಕ್ರಮ ನಿರೂಪಿಸಿದರು.
ಸಂಘದ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನಾಥ ಮೆಲಾಂಟ ಸ್ವಾಗತಿಸಿದರು. ನಿರ್ದೇಶಕರಾದ ಹೃಷಿಕೇಶ್ವರು ವಂದಿಸಿದರು.
36 ವರುಷಗಳ ಕಾಲ ಸೇವೆ
1989ರಲ್ಲಿ ಇಡ್ಕಿದು ಸೇವಾ ಸಹಕಾರಿ ಸಂಘಕ್ಕೆ ಸಾಮಾನ್ಯ ನೌಕರನಾಗಿ ಸೇರಿದ ಈಶ್ವರ ನಾಯ್ಕ್ ರವರು ಆ ಬಳಿಕ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ, 2007ರಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಭಡ್ತಿಹೊಂದಿದ್ದರು. ಪ್ರಸ್ತುತ 36 ವರುಷಗಳ ಕಾಲ ಸೇವೆ ಸಲ್ಲಿಸಿ ಇದೀಗ ನಿವೃತ್ತಿಹೊಂದಿದ್ದಾರೆ. ಇವರು ಇಡ್ಕಿದು ಗ್ರಾಮದ ಮಿತ್ತೂರು ಏಮಾಜೆ ನಿವಾಸಿಯಾಗಿದ್ದು, ಪತ್ನಿ ಗೀತಾ, ಪುತ್ರ, ಗುರುಪ್ರಸಾದ್, ಪುತ್ರಿಯರಾದ ತೇಜಸ್ವಿನಿ, ಚೈತನ್ಯರವರೊಂದಿಗೆ ವಾಸಿಸುತ್ತಿದ್ದಾರೆ.