ಪುತ್ತೂರು: ಇತ್ತೀಚೆಗೆ ನಾನಾ ಕಡೆ ಆನೆಗಳ ಉಪಟಳ ಜಾಸ್ತಿಯಾಗಿದ್ದು, ಮದ್ಲ ಎಂಬಲ್ಲಿ ಆನೆ ತೋಟಕ್ಕೆ ನುಗ್ಗಿ ಕೃಷಿ ನಾಶ ಪಡಿಸಿದೆ ಎಂದು ತಿಳಿದುಬಂದಿದೆ.
ಆನೆಯೂ ಮದ್ಲದ ಪ್ರವೀಣ್ ಬೋರ್ಕರ್ ಎಂಬವರ ಕೃಷಿ ಜಮೀನಿಗೆ ಹಾಗೂ ಇತರ ಮೂರು ಕೃಷಿಕರ ಜಮೀನಿಗೆ ಸೋಮವಾರ ಮತ್ತು ಮಂಗಳವಾರ ಲಗ್ಗೆಯಿಟ್ಟು ಕೃಷಿ ನಾಶಪಡಿಸಿದೆ.

ಪೆರ್ನಾಜೆ ಭಾಗದಲ್ಲಿ ಎರಡು ಆನೆಗಳು, ಚಾಕೊಟೆ, ಕಾವು, ಮಾಡ್ನೂರು ಒಂದು ಆನೆ ಇದೆ ಎಂದು ಸಾರ್ವಜನಿಕ ವಲಯದಲ್ಲಿ ಜನರು ಭಯ ವ್ಯಕ್ತಪಡಿಸುತ್ತಿದ್ದಾರೆ