ಜಯ ಕರ್ನಾಟಕ ಜನಪರ ವೇದಿಕೆಯಿಂದ ಪರಿಸರ ದಿನಾಚರಣೆ – “ಸಿಂಧೂರ ವನ”

0

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ

ಮಾಣಿ: ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಗಳಲ್ಲಿ “ಸಿಂಧೂರ ವನ” ಎಂಬ ಹೆಸರಿನಲ್ಲಿ ಪರಿಸರ ದಿನವನ್ನು ಆಚರಿಸಲಾಗಿದೆ. ಈ ಪ್ರಯುಕ್ತ ಜಯ ಕರ್ನಾಟಕ ಜನಪರ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಪರಿಸರ ದಿನಾಚರಣೆ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಿಡ ನೆಡುವ ಮೂಲಕ ಸಿಂಧೂರ ವನ” ಕಾರ್ಯಕ್ರಮ ನಡೆಯಿತು.

ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ದ.ಕ. ಜಿಲ್ಲಾ ವತಿಯಿಂದ ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಿಂದ ವೀರಮರನವನ್ನಪ್ಪಿದ ಯೋಧರಿಗೆ ಗೌರವ ಸೂಚಿಸುವ ಸಲುವಾಗಿ “ಸಿಂಧೂರ ವನ” ಎಂಬ ಹೆಸರಿನಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸೆಕ್ರೆಟರಿ ಮಹೇಶ್ ಜೆ ಶೆಟ್ಟಿ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ,ಮುಖ್ಯ ಶಿಕ್ಷಕಿ ಸುಪ್ರಿಯಾ.ಡಿ, ಸದಾಶಿವ ಶೆಟ್ಟಿ ಮಾಣಿ, ಸತೀಶ್ ಪೂಜಾರಿ ಬಾಕಿಲ ಶಾಲಾ ವ್ಯವಸ್ಥಾಪಕಿ ನಯನ, ದೈಹಿಕ ಶಿಕ್ಷಕ ದಿನಾಕರ್ ಪೂಜಾರಿ,ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕ ರಾಮ್ ದಾಸ್ ಶೆಟ್ಟಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಜ್ಯೋತಿ ಪ್ರಕಾಶ್ ಪುಣಚ, ನಿರಂಜನ್ ರೈ ಕುರ್ಲೆತ್ತಿಮಾರ್, ರಾಜೀವ್ ವಿಟ್ಲ, ಪ್ರವೀಣ್ ನಾಯ್ಕ್ ಅನಂತಾಡಿ, ರಾಜೇಶ್ ನಾಯಕ್, ಪ್ರಭಾಕರ ಅಮೈ, ಪವನ್ ರೈ ಬೆಳ್ಳಾರೆ, ಆದೇಶ್ ಪಂಡಿತ್ ಅನಂತಾಡಿ, ತಿಲಕ್ ರಾಜ್ ಶೆಟ್ಟಿ, ಬಾಲವಿಕಾಸ ಶಾಲೆಯ ಶಿಕ್ಷಕರು,ಮಹಿಳಾ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here