ಪುತ್ತೂರು:ಈಶ್ವರಮಂಗಲ ಶ್ರೀ ಶಿವಪಂಚಾಕ್ಷರಿ ಯಕ್ಷಪ್ರತಿಷ್ಠಾನಂ ವತಿಯಿಂದ ಭಾಗವತಿಗೆ ಅಭ್ಯಾಸ, ವಿದ್ಯಾರ್ಥಿಗಳ ರಂಗಪ್ರವೇಶ ಹಾಗೂ ಗುರುವಂದನಾ ಕಾರ್ಯಕ್ರಮ ಮೇ.31ರಂದು ಬೆಳ್ಳಿಚಡವು ಶ್ರೀ ಅಯ್ಯಪ್ಪ ಶಾರದಾಂಬ ಭಜನಾಮಂದಿರದಲ್ಲಿ ನಡೆಯಿತು.
ವೆಂಕಟರಮಣ ದೇಲಂಪಾಡಿ ಇವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವವಿನೋದ ಬನಾರಿ ಇವರಿಗೆ ಗೌರವಾರ್ಪಣೆ ನಡೆಯಿತು. ಯಕ್ಷಗಾನ ತಾಳಮದ್ದಳೆ ʼಶ್ರೀ ಅಯ್ಯಪ್ಪ ದರ್ಶನʼ ನಡೆಯಿತು.

ಮಂದಿರದ ಅರ್ಚಕ ಚಂದ್ರಗುರುಸ್ವಾಮಿಯವರಿಂದ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಉದಯಕುಮಾರ್ ಪುಳಿಮಾರಡ್ಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಭಾಗವತಿಗೆ ಗುರು ಗಾನಕೋಗಿಲೆ ಮೋಹನ ಮೆಣಸಿನಕಾನ ಇವರಿಗೆ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಮತ್ತು ಯಕ್ಷಗುರು ವಿಶ್ವವಿನೋದ ಬನಾರಿ ಇವರಿಗೆ ಗೌರವಾರ್ಪಣೆ ನಡೆದು ಯಕ್ಷಗಾನ ತಾಳಮದ್ದಳೆ ಸಂಪನ್ನಗೊಂಡಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಮೋಹನ ಮೆಣಸಿನಕಾನ ಮತ್ತು ವಿದ್ಯಾಶ್ರೀ ಆಚಾರ್ಯ ಈಶ್ವರಮಂಗಲ, ಚೆಂಡೆಮದ್ದಳೆ ವಾದಕರಾಗಿ ವಿಷ್ಣುಶರಣ ಬನಾರಿ, ಶ್ರೀಧರ ಆಚಾರ್ಯ ಈಶ್ವರಮಂಗಲ, ಸಮರ್ಥವಿಷ್ಣು ಕಡಂಬಳಿಕೆ, ಬಿ.ಹೆಚ್ ಕೃಷ್ಣಪ್ರಸಾದ, ಸದಾನಂದ ಪೂಜಾರಿ ಮಯ್ಯಾಳ, ಶ್ರೀದೇವ ಆಚಾರ್ಯ ಈಶ್ವರಮಂಗಲ, ನಿಖಿಲ್ ಅರಿಪ್ಪಳ,ಮುಮ್ಮೇಳದಲ್ಲಿ ರಾಮಯ್ಯ ರೈ ಕಲ್ಲಡ್ಕ, ಬಾಲಕೃಷ್ಣ ಗೌಡ ದೇಲಂಪಾಡಿ, ಭಾಸ್ಕರ ದೇಲಂಪಾಡಿ, ಪ್ರಭಾಕರ ಆಚಾರ್ಯ ಹಿರಿಯಾಣ, ಸಂಜೀವ ರಾವ್ ಮಯ್ಯಾಳ, ಪದ್ಮನಾಭ ರಾವ್ ಮಯ್ಯಾಳ, ಶ್ರೀನಿಧಿ ಮಯ್ಯಾಳ, ಹರ್ಷವರ್ಧನ್ ರಾವ್ ಮಯ್ಯಾಳ ಸಹಕರಿಸಿದರು.
ಮಂದಿರ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಹಾಗೂ ಸರ್ವಸದಸ್ಯರು ವಿದ್ಯಾರ್ಥಿಗಳ ಪೋಷಕರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ಸಂಘದ ಸಂಚಾಲಕ ಪ್ರಭಾಕರ ಆಚಾರ್ಯ ಸ್ವಾಗತಿಸಿದರು. ಮಂದಿರದ ಸದಸ್ಯ ಶೀನಪ್ಪ ಎಮ್ ವಂದಿಸಿದರು.