ಈಶ್ವರಮಂಗಲ :ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ,ಶಾಲಾ ಸಂಘಗಳ ಉದ್ಘಾಟನಾ ಕಾರ್ಯಕ್ರಮ, ದತ್ತಿನಿಧಿ ವಿತರಣೆ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಜೂ.5ರಂದು ನಡೆಯಿತು.

ಶಾಲಾ ಆರಂಭೋತ್ಸವವನ್ನು ಸಂಸ್ಥೆಯ ನಿವೃತ್ತ ದೈಹಿಕ ಶಿಕ್ಷಕ ರಘುನಾಥ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಅತಿಥಿ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ,ಪ್ರಸ್ತುತ ಕಾವು ಉ.ಹಿ.ಪ್ರಾ ಶಾಲೆಯ ಜಿ. ಪಿ.ಟಿ ಶಿಕ್ಷಕಿ ಪ್ರತಿಮಾ ಇವರು ವಿವಿಧ ಶಾಲಾ ಸಂಘಗಳನ್ನು ಉದ್ಘಾಟಿಸಿದರು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಲೇಖನ ಸಾಮಗ್ರಿ ನೀಡುವುದರೊಂದಿಗೆ ಮುಖ್ಯ ಗುರುಗಳು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ದಿವಂಗತ ಜಯರಾಮ್ ರೈ ಸಾಂತ್ಯ ಇವರ ಸ್ಮರಣಾರ್ಥ ಇವರ ಮಕ್ಕಳು ನೀಡಿದಂತಹ ದತ್ತಿನಿಧಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ರಘುನಾಥ ರೈ ಕುತ್ಯಾಳ ಇವರ ನೇತೃತ್ವದಲ್ಲಿ ಗಣ್ಯರು ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ವೇದಿಕೆಯಲ್ಲಿ ಶಾಲಾ ಸಂಚಾಲಕ ಸರ್ವೋತ್ತಮ ಬೋರ್ಕರ್, ಆಡಳಿತ ಮಂಡಳಿಯ ಅಧ್ಯಕ್ಷ ಗೋಪಾಲಕೃಷ್ಣ ಕುಂಜತ್ತಾಯ ,ಉಪಾಧ್ಯಕ್ಷ ಸೀತಾರಾಮ ಭಟ್ ಬರೆಕೆರೆ ಹಾಗೂ ಮುಖ್ಯ ಗುರುತ ವನಿತಾ ಕೆ ಉಪಸ್ಥಿತರಿದ್ದರು. ಹಿಂದಿ ಸಹಶಿಕ್ಷಕಿ ಸುಪ್ರಭಾ ಪ್ರಾರ್ಥಿಸಿದರು. ಕನ್ನಡ ಶಿಕ್ಷಕ ಸುರೇಶ್, ದೈಹಿಕ ಶಿಕ್ಷಕ ಮುರಳಿಮೋಹನ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಗಳ ಅಧ್ಯಕ್ಷರು, ಶಿಕ್ಷಕ – ಶಿಕ್ಷಕೇತರರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.