ರಾಮಕುಂಜ: ಸಮಸ್ತ ಕೇರಳ ಜಂಯ್ಯತುಲ್ ಉಲಮಾದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಆತೂರು ಬದ್ರಿಯಾ ಅಲ್ ಬಿರ್ರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ತರಗತಿ ಉದ್ಘಾಟನಾ ಸಮಾರಂಭ ಜೂ.4ರಂದು ನಡೆಯಿತು.
ಸಮಸ್ತ ಕೇರಳ ಜಂಯ್ಯತುಲ್ ಉಲಮಾದ ಮುಶಾವರ ಸದಸ್ಯರಾದ ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉಸ್ತಾದ್ ತರಗತಿ ಉದ್ಘಾಟಿಸಿ ಮಾತನಾಡಿ, ಅಲ್ ಬಿರ್ರ್ ಸಂಸ್ಥೆಯು ಕೇವಲ ಶೈಕ್ಷಣಿಕವಾದ ವಿಚಾರಕ್ಕೆ ಮಾತ್ರವಲ್ಲ ಪಾರತ್ರಿಕ ಲೋಕದಲ್ಲಿ ಗೆಲುವನ್ನು ಸಾಧಿಸಲು ಇರುವ ಅತ್ಯುತ್ತಮ ಪಠ್ಯ ಪದ್ಧತಿಯಾಗಿದೆ ಎಂದರು. ಆತೂರು ಬಿ.ಜೆ.ಎಂ ಮುದರ್ರಿಸ್ ಸೈಯ್ಯದ್ ಜುನೈದ್ ಜಿಫ್ರಿ ತಂಙಳರವರು ದುವಾ ಆಶಿರ್ವಚನ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬ್ ಸುಲ್ತಾನ್ ದಾರಿಮಿ ಉಸ್ತಾದರು ಸಂದೇಶ ಭಾಷಣ ಮಾಡಿದರು.
ಸಂಸ್ಥೆಯ ಸಂಚಾಲಕರಾದ ಅಹ್ಮದ್ ಕುಂಞಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರ.ಕಾರ್ಯದರ್ಶಿ ಬಿ.ಕೆ ರಝಾಕ್ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದರು. ಬದ್ರಿಯಾ ಅರೇಬಿಕ್ ಸ್ಕೂಲ್ ಪ್ರಧಾನ ಅಧ್ಯಾಪಕರಾದ ಹಂಝ ಸಖಾಫಿ, ಕಡಬ ಅಲ್ ಬಿರ್ರ್ ಸ್ಕೂಲ್ನ ಸಂಚಾಲಕರಾದ ಶರೀಫ್ ಫೈಝಿ, ತದ್ ಬೀರುಲ್ ಇಸ್ಲಾಂ ಮುದ್ರಸದ ಪ್ರಧಾನ ಅಧ್ಯಾಪಕರಾದ ಸತ್ತಾರ್ ಅಸ್ನವಿ ಹಾಗೂ ಆತೂರು ಬಿ.ಜೆ.ಎಂ. ಪ್ರ.ಕಾರ್ಯದರ್ಶಿ ಸಿರಾಜ್ ಬಡ್ಡಮೆ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲ ಸಮದ್ ಅನ್ಸಾರಿಯವರು ಪ್ರಾಸ್ತಾವಿಕ ಭಾಷಣದ ಮೂಲಕ ಸಂಸ್ಥೆಯನ್ನು ಪರಿಚಯಿಸಿದರು. ಸಂಸ್ಥೆಯ ಪ್ರಾಧ್ಯಾಪಕ ಅದ್ನಾನ್ ಅನ್ಸಾರಿ ಸ್ವಾಗತಿಸಿದರು. ಸಂಸ್ಥೆಯ ಪ್ರಾಧ್ಯಾಪಕ ಅಬೂಬಕ್ಕರ್ ಕೌಸರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ಸಿದ್ಧೀಕ್ ಓ, ಖಾದರ್, ಪೊಡಿಕುಂಞಿ, ಬಿ.ಆರ್.ಅಬ್ದುಲ್ ಖಾದರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.