ರಾಮಕುಂಜ: ಶ್ರೀ ರಾಮಕುಂಚೇಶ್ವರ ವಿದ್ಯಾಲಯದಲ್ಲಿ ’ಭೂಮಿ ಪುನಃ ಸ್ಥಾಪನೆ ಮತ್ತು ಪರಿಸರ ಉಳಿಸಿ’ ಎಂಬ ಸಂದೇಶದೊಂದಿಗೆ ವಿಶ್ವ ಪರಿಸರ ದಿನವನ್ನು ಜೂ.5ರಂದು ಆಚರಿಸಲಾಯಿತು.
ಶಿಕ್ಷಕಿ ಅಪೇಕ್ಷ ಪರಿಸರ ದಿನಾಚರಣೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಪರಿಸರ ವ್ಯವಸ್ಥೆಯ ಮಹತ್ವವನ್ನು ತಿಳಿಸುವ ಭಾಷಣ ಮತ್ತು ಪರಿಸರ ನಾಶದಿಂದ ಆಗುವ ದುಷ್ಪರಿಣಾಮಗಳ ಕುರಿತ ಆಕರ್ಷಕ ಕಿರುನಾಟಕವನ್ನು ಏರ್ಪಡಿಸಲಾಯಿತು. ಪರಿಸರ ವ್ಯವಸ್ಥೆಯ ಪುನಃಸ್ಥಾಪನೆಯನ್ನು ಬೆಂಬಲಿಸುವ ಸಲುವಾಗಿ ವಿದ್ಯಾರ್ಥಿಗಳ ಪ್ರತಿಜ್ಞೆ ಹಾಗೂ ಮಕ್ಕಳಿಂದ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು. ಮುಖ್ಯಗುರು ಪ್ರವೀದ್ ಹಾಗೂ ಶಿಕ್ಷಕ- ಶಿಕ್ಷಕಿಯರು ಪಾಲ್ಗೊಂಡಿದ್ದರು.