ಅಧ್ಯಕ್ಷ; ಅಲ್ ಅಮೀನ್, ಕಾರ್ಯದರ್ಶಿ: ಮುಹಮ್ಮದ್ ರಾಝಿ
ರಾಮಕುಂಜ: ನೀರಾಜೆ ನೂರುಲ್ ಹುದಾ ಮದ್ರಸದ ವಿದ್ಯಾರ್ಥಿ ಸಂಘಟನೆಯಾದ ಎಸ್ಕೆಎಸ್ಬಿವಿ ಇದರ ಮಹಾಸಭೆಯು ಮದ್ರಸ ಹಾಲ್ನಲ್ಲಿ ನಡೆಯಿತು.
ಸದರ್ ಉಸ್ತಾದ್ ಶೌಕತ್ ಅಲಿ ಅಸ್ಲಮಿ ಉದ್ಘಾಟಿಸಿದರು. ನಂತರ ೨೦೨೫ -೨೬ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅಲ್ ಅಮೀನ್, ಕಾರ್ಯದರ್ಶಿಯಾಗಿ ಮುಹಮ್ಮದ್ ರಾಝಿ, ವರ್ಕಿಂಗ್ ಕಾರ್ಯದರ್ಶಿ ಶಿಹಾಬುದ್ದೀನ್, ಕೋಶಾಧಿಕಾರಿಯಾಗಿ ತ್ವಲ್ಹಾ ಇಬ್ರಾಹಿಂ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಅಫ್ಫಾಮ್, ರಶೀನ್ ಶಾಝಿಲ್, ಜೊತೆ ಕಾರ್ಯದರ್ಶಿಯಾಗಿ ಜಝೀಲ್, ಶಕೀಬ್, ಅಫ್ಫಾನ್, ಸದಸ್ಯರಾಗಿ ಶಾಮಿಲ್ ಅಕ್ಮಲ್ ಸಹೀದ್ ಕೈಸ್, ಮುಹಮ್ಮದ್ ಅಕ್ಮರ್, ನೌಫಲ್ ರಮೀಝ್ ಆಯ್ಕೆಯಾದರು. ಅಬ್ದುಲ್ ಲತೀಫ್ ಫೈಝಿ ಸ್ವಾಗತಿಸಿದರು.