ಕಾಣಿಯೂರು: ಕಾಣಿಯೂರು ಸ. ಹಿ. ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಡಿಕೆ ಗಿಡಗಳು, ಹಣ್ಣಿನ ಗಿಡಗಳು ಮತ್ತು ಗಂಧಸಾಲೆ ಗಿಡವನ್ನು ನೆಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಪರಮೇಶ್ವರ ಅನಿಲ, ಸದಸ್ಯ ದಿನೇಶ್ ಅನ್ಯಾಡಿ, ಪ್ರದೀಪ್ ಬೊಬ್ಬೆಕೇರಿ, ಶಾಲಾ ಮುಖ್ಯಗುರು ಬಾಲಕೃಷ್ಣ ಕೆ, ಕಾಣಿಯೂರು ಕಣ್ವರ್ಷಿ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷರು, ಸದಸ್ಯರು, ಶಾಲಾ ಮಕ್ಕಳು, ಶಿಕ್ಷಕಿಯರಾದ ದೇವಕಿ ಪಿ, ಸುಜಯ, ಭಾರತಿ ಕೆ, ವೀಕ್ಷಿತಾ, ಶೇರಿನಾ ಬೇಗಂ, ದಿವ್ಯಾ , ಚೈತನ್ಯ, ವಾಣಿಶ್ರೀ ನಯನ ಪ್ರಭು ಉಪಸ್ಥಿತರಿದ್ದರು.