ಉಪ್ಪಿನಂಗಡಿ: ಇಲ್ಲಿನ ದುರ್ಗಾಗಿರಿ ಎಂಬಲ್ಲಿರುವ ಹಿಂದೂ ರುದ್ರ ಭೂಮಿಯ ಮೇಲ್ಚಾವಣಿಗೆ ವಾಲಿಕೊಂಡು ಬೀಳುವ ಸ್ಥಿತಿಯಲ್ಲಿದ್ದ ಮರವನ್ನು ಉಪ್ಪಿನಂಗಡಿ ಕಂದಾಯ ಹೋಬಳಿಯ ಉಪತಹಶೀಲ್ದಾರ್ ಚೆನ್ನಪ್ಪ ಗೌಡರವರ ಸೂಚನೆಯಂತೆ ಉಪ್ಪಿನಂಗಡಿ ಗೃಹರಕ್ಷಕದಳದವರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡವು ತೆರವುಗೊಳಿಸಿದೆ.
ತೆರವು ಕಾರ್ಯಾಚರಣೆಯಲ್ಲಿ ಸ್ಥಳೀಯರಾದ ಹೊನ್ನಪ್ಪ, ಮನೋಜ್, ತಂಡದ ಸೆಕ್ಷನ್ ಲೀಡರ್ ದಿನೇಶ್, ಜನಾರ್ದನ ಆಚಾರ್ಯ, ಸೋಮನಾಥ್, ಜುನೈದ್, ದೇವರಾಜ್, ಶಿಬುಜಾನ್ ಇದ್ದರು.
