ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ- ಇದರ ಕೇಂದ್ರ ಶಾಖೆಯಲ್ಲಿ ’ಮುಂಗಾರು ಹಂಗಾಮ’ ಕರಪತ್ರ ಬಿಡುಗಡೆ

0

ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ (ನಿ.) ಪುತ್ತೂರು ದ.ಕ., ಇದರ ಕೇಂದ್ರ ಶಾಖೆಯಲ್ಲಿ ’ಮುಂಗಾರು ಹಂಗಾಮ’ ವಿಶೇಷ ಯೋಜನೆಯ ಕರಪತ್ರ ಬಿಡುಗಡೆಯು ಜೂ.5ರಂದು ಸಂಘದ ಕೇಂದ್ರ ಕಛೇರಿಯಲ್ಲಿ ನಡೆಯಿತು.

ಇದರಲ್ಲಿ ಒಂದು ವರ್ಷದ ನಿರಖು ಠೇವಣಿಗೆ ಶೇ.10 ವಿಶೇಷ ಬಡ್ಡಿದರ ಮತ್ತು ಚಿನ್ನಾಭರಣ ಈಡಿನ ಮೇಲೆ ಪ್ರತಿ ಗ್ರಾಂ ಗೆ ರೂ. 7777/- ರಂತೆ ಗರಿಷ್ಠ ಸಾಲ – ರೂ.100-ಕ್ಕೆ ತಿಂಗಳಿಗೆ ರೂ.85 ಪೈಸೆಯಂತೆ ಕನಿಷ್ಠ ಬಡ್ಡಿ ದರದ ಯೋಜನೆಯಾಗಿರುತ್ತದೆ.

ಅಥಿತಿಗಳಾಗಿ ಸಂತೋಷ್ ಕುಮಾರ್ ರೈ, ಜಿ.ಕೆ. ಪ್ರಸನ್ನ, ಉದಯರವಿ ಬಿ.ಕೆ., ರತ್ನಾಕರ ಎಲ್. ಸಿ., ಗಣೇಶ್ ಪ್ರಸಾದ್ ಎ. ಎಸ್., ದಿನೇಶ್ ಕುಲಾಲ್ ಮುದಲಾಜೆ, ಜನಾರ್ಧನ ಕೆ., ಸಿಟಿಗುಡ್ಡೆ, ಗೋಪಾಲಕೃಷ್ಣ ಆಚಾರ್ಯ, ಹರ್ಷಿತ್ ಎಂ., ರಜಿತಾ ಹಾಗೂ ಗ್ರಾಹಕ ಬಂಧುಗಳು ಉಪಸ್ಥಿತರಿದ್ದು, ಶುಭ ಹಾರೈಸಿದರು. ಈ ವಿಶೇಷ ಯೋಜನೆಯ ಪ್ರಯೋಜನವನ್ನು ಗ್ರಾಹಕ ಸದಸ್ಯ ಬಂಧುಗಳು ಪಡೆದುಕೊಳ್ಳಬೇಕೆಂದು ಸಹಕಾರ ಸಂಘದ ಅಧ್ಯಕ್ಷ ಹಾಗೂ ವಕೀಲರಾದ ಭಾಸ್ಕರ ಎಂ ಪೆರುವಾಯಿ ತಿಳಿಸಿದರು.

LEAVE A REPLY

Please enter your comment!
Please enter your name here