ಪುತ್ತೂರು: ಶಿಕ್ಷಣ ಮತ್ತು ಆರ್ಥಿಕವಾಗಿ ಸ್ವತಂತ್ರರಾಗಲು ವೇದಿಕೆಯನ್ನು ಒದಗಿಸಿದಾಗ ಗ್ರಾಮೀಣ ಪ್ರದೇಶಗಳು ತಮ್ಮ ಬೆಳವಣಿಗೆಯ ನಿರೀಕ್ಷೆಗಳನ್ನು ಸುಧಾರಿಸಲು ಸಹಾಯವಾಗುತ್ತದೆ.ಇದಕ್ಕೆ ಪೂರಕವಾಗಿ ಗ್ರಾಮವಿಕಾಸ ಸಮಿತಿಯ ಯೋಜನೆಗಳು ಕಾರ್ಯನಿರ್ವಹಿಸುತ್ತದೆ. ಗ್ರಾಮೀಣ ಪ್ರಗತಿಯಿಂದ ಮಾತ್ರ ರಾಷ್ಟ್ರವು ಅಭಿವದ್ಧಿಯ ಪಥದಲ್ಲಿ ಮುಂದುವರಿಯಲು ಸಾಧ್ಯವಾಗುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಮುಖ್ಯಕಾರ್ಯನಿರ್ವಾಹಣಾಧಿಕಾರಿ ವೆಂಕಟರಮಣ ರಾವ್ ಮಂಕುಡೆ ರವರು ಹೇಳಿದರು.
ನರೇಂದ್ರ ಪ.ಪೂ.ಕಾಲೇಜಿನ ಗ್ರಾಮ ವಿಕಾಸ ಸಮಿತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗೌರವಾಧ್ಯಕ್ಷರಾಗಿ ಬೂಡಿಯಾರು ರಾಧಾಕೃಷ್ಣ ರೈ, ಅಧ್ಯಕ್ಷರಾಗಿ ರವೀಂದ್ರನಾಥ ರೈ ಬಳ್ಳಮಜಲುಗುತ್ತು, ಕಾರ್ಯದರ್ಶಿಗಳಾಗಿ ಕೀರ್ತಿ ನಕ್ಷತ್ರಿತ್ತಾಯ, ಉಪಾಧ್ಯಕ್ಷರಾಗಿ ಮೋಹನ್ ಪಾಟಾಳಿ ಮತ್ತು ರಮ್ಯಾ, ಜೊತೆ ಕಾರ್ಯದರ್ಶಿಗಳಾಗಿ ಸುಕನ್ಯಾ ಮತ್ತು ಶ್ರೀಕೃಷ್ಣ , ಸದಸ್ಯರಾಗಿ ಜೈರಾಜ್ ಭಂಡಾರಿ ಡಿಂಬ್ರಿ, ಗಣೇಶ್ ರೈ ಬೂಡಿಯಾರು, ಮಧು ನರಿಯೂರು, ಧನರಾಜ್ ಅಲೇಕಿ, ಶಶಿಧರ ಕಿನ್ನಿಮಜಲು, ಚಂದ್ರಹಾಸ ರೈ ತುಂಬೆದಕೋಡಿ, ಸುರೇಂದ್ರ ರೈ ಬಳ್ಳಮಜಲು, ಸತೀಶ್ ರೈ ಡಿಂಬ್ರಿ, ನವೀನ್ ಕುಮಾರ್ ರೈ ಬಳ್ಳಮಜಲು, ವಿಜಯಹರಿ ರೈ ಬಳ್ಳಮಜಲು ಆಯ್ಕೆಯಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ನರೇಂದ್ರ ಪ.ಪೂ.ಕಾಲೇಜು ಮತ್ತು ಕುರಿಯಗ್ರಾಮ ವಿಕಾಸ ಸಮಿತಿ ವತಿಯಿಂದ ಈ ವರ್ಷ ಆಯೋಜಿಸಲಿರುವ ಕಾರ್ಯಕ್ರಮಗಳ ಕುರಿತು ನಿರ್ಧರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಸಂತೋಷ ಬಿ.,ಸದಸ್ಯರಾದ ಉಮೇಶ್ ನಾಯಕ್, ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್, ಕಳೆದ ಸಾಲಿನ ಗ್ರಾಮವಿಕಾಸ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ರೇಖನಾಥ ರೈ ಇವರು ಉಪಸ್ಥಿತರಿದ್ದರು.
ಕಾಲೇಜಿನ ಗ್ರಾಮವಿಕಾಸ ಸಮಿತಿಯ ಸಂಯೋಜಕರಾದ ಉಪನ್ಯಾಸಕರಾದ ಕಾರ್ತಿಕ್ ಕುಮಾರ್ ಇವರು ಕಾರ್ಯಕ್ರಮದಲ್ಲಿ ಸ್ವಾಗತಿಸಿ, ವಂದಿಸಿದರು. ಕಾಲೇಜಿನ ಸಿಬ್ಬಂದಿ ವರ್ಗದವರಾದ ಸತೀಶ್ ಸಹಕರಿಸಿದರು.