ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ -ನಾಯಕಿಯಾಗಿ ಮಾನ್ಯ, ಉಪನಾಯಕಿಯಾಗಿ ಆರಾಧ್ಯ ಎಸ್. ಆಳ್ವ

0

ಪುತ್ತೂರು: 2025-26ನೇ ಸಾಲಿನ ಶಾಲಾ ನಾಯಕಿ ಮತ್ತು ಉಪನಾಯಕಿಯ ಚುನಾವಣೆ ಜೂ.10ರಂದು ಪ್ರಜಾಪ್ರಭುತ್ವದ ಮಾದರಿಯಲ್ಲಿ ನಡೆಯಿತು. ಶಾಲಾ ನಾಯಕಿ ಸ್ಥಾನಕ್ಕೆ ನಾಲ್ಕು ಅಭ್ಯರ್ಥಿಗಳು ಸ್ವರ್ಧಿಸಿದ್ದರು. ಹಾಗೂ ಶಾಲಾ ಉಪನಾಯಕಿ ಸ್ಥಾನಕ್ಕೆ ನಾಲ್ಕು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಶಾಲಾ ನಾಯಕಿಯಾಗಿ 10ನೇ ತರಗತಿಯ ಕು| ಮಾನ್ಯ (ಪರಮೇಶ್ವರ ಜೆ. ಮತ್ತು ಶೀಲಾವತಿ ಎಂ. ಎಸ್.ರವರ ಪುತ್ರ್ರಿ) ಹಾಗೂ ಉಪನಾಯಕಿಯಾಗಿ 9ನೇ ತರಗತಿಯ ಕು| ಆರಾಧ್ಯ ಎಸ್. ಆಳ್ವ (ವಿವೇಕ್ ಆಳ್ವ ಮತ್ತು ಸ್ಮಿತಾ ಆಳ್ವರವರ ಪುತ್ರಿ) ಆಯ್ಕೆಯಾಗಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯಿನಿಯವರ ಮಾರ್ಗದರ್ಶನದಲ್ಲಿ ಹಾಗೂ ಶಿಕ್ಷಕ- ಶಿಕ್ಷಕೇತರರ ಸಹಕಾರದೊಂದಿಗೆ ಈ ಚುನಾವಣೆ ಸುಸೂತ್ರವಾಗಿ ನಡೆಸಲಾಯಿತು.

LEAVE A REPLY

Please enter your comment!
Please enter your name here