ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ನಲ್ಲಿ ಕಳೆದ ಹಲವು ವರ್ಷಗಳಿಂದ ವಿದ್ಯಾರ್ಥಿಗಳ ಶ್ರೇಯಸ್ಸಿಗಾಗಿ ವಿವಿಧ ಹೋಮ ಹವನಗಳನ್ನು ನಡೆಸಲಾಗಿತ್ತಿದ್ದು ಈ ಬಾರಿಯ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮುಲ್ಕಿ ವೆಂಕಟರಮಣ ದೇವಸ್ಥಾನದ ಅರ್ಚಕ ವೇದಮೂರ್ತಿ ರಮಾನಂದ ಭಟ್ ನೇತೃತ್ವದಲ್ಲಿ ರುದ್ರ ಹವನ ನಡೆಸಲಾಯಿತು.
ಶಿವನನ್ನು ಮೆಚ್ಚಿಸಲು ಈ ರುದ್ರ ಹೋಮವನ್ನು ನಡೆಸಲಾಗುತ್ತಿದ್ದು, ಇದರಿಂದ ನಮ್ಮ ಹಿಂದಿನ ಜನ್ಮದ ಕೆಟ್ಟ ಕರ್ಮಗಳ ಫಲದಿಂದ ಸಂಭವಿಸಬಹುದಾದ ಅಪಘಾತಗಳು, ಗಂಭೀರ ಕಾಯಿಲೆಗಳು ಮತ್ತು ಅಕಾಲಿಕ ಮರಣದಿಂದ ನಮಗೆ ರಕ್ಷಣೆ ದೊರೆಯುತ್ತದೆ ಎನ್ನಲಾಗುತ್ತದೆ.
ಸಂಸ್ಥೆಯ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಚಾಲಕ ಗೋಕುಲ್ನಾಥ್ ಪಿ.ವಿ., ಪ್ರಾಂಶುಪಾಲೆ ಹೇಮಲತಾ ಗೋಕುಲ್ನಾಥ್, ಉಪನ್ಯಾಸಕ ವೃಂದ, ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆನರಾ ಬ್ಯಾಂಕ್, ಆರ್ವಿ ಗ್ರಾಫಿಕ್ಸ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿಕ್ಕಿ ಟೈಲರ್, ಉದಯವಾಣಿ ಪತ್ರಿಕೆ, ಶೆಣೈ ಬ್ರದರ್ಸ್, ಕೋಲಾಡಿ ಬಟನ್ಸ್ ಮುಂತಾದ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ, ನಿವೃತ್ತ ಶಿಕ್ಷಕ ಹಾಗೂ ಅಂಕಣಕಾರ ನಾರಾಯಣ ರೈ ಕುಕ್ಕುವಳ್ಳಿ ಸೇರಿದಂತೆ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದರು.