ವಿಶ್ರಾಂತ ಕೆ.ಎ.ಎಸ್ ಅಧಿಕಾರಿಣಿ ವಿಜಯಕುಮಾರಿ ಶೆಣೈಯವರಿಗೆ ಹೊಸೂರು ಕ್ಷೇತ್ರದಲ್ಲಿ ಸನ್ಮಾನ

0

ಪುತ್ತೂರು: ಪುತ್ತೂರಿನ ವಿಶ್ರಾಂತ ಹಿರಿಯ ಕೆ.ಎ.ಎಸ್ ಅಧಿಕಾರಿಣಿ ವಿಜಯ ಕುಮಾರಿ ಶೆಣೈ ಅವರನ್ನು ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹೊಸೂರು ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಭಗವಾನ್ ಶ್ರೀ ಹನುಮಾನ್ ಮಂದಿರ ಇದರ ಲೋಕಾರ್ಪಣೆ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.


ಇವರು ಈ ಹಿಂದೆ ಕುಮಟಾ ವಿಭಾಗದ ಅಸಿಸ್ಟೆಂಟ್ ಕಮಿಷನರ್ ಆಗಿ ಸೇವೆಯನ್ನು ಸಲ್ಲಿಸಿದ್ದರು. ಸನ್ಮಾನದ ಸಂದರ್ಭದಲ್ಲಿ ವೇದಿಕೆಯಲ್ಲಿ ಭಗವಾನ್ ಶ್ರೀ ಹನುಮಾನ್ ಮಂದಿರದ ನಿರ್ಮಾತೃ ನಾಸಿಕ್ ನ ಉದ್ಯಮಿಯೂ ಆಗಿರುವ ಮಾರುತಿ ಪ್ರಭು , ಪುತ್ತೂರಿನ ಡಾ || ವೈ.ಉಮಾನಾಥ ಶೆಣೈ , ಡಾ|| ಜಯಪ್ರಕಾಶ್ ,ಮಹೇಶ್ ಠಾಕೂರ್ , ರಾಮಚಂದ್ರ ಸಾಮಂತ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ನೂತನವಾಗಿ ನಿರ್ಮಾಣಗೊಂಡಿರುವ ಕ್ಷೇತ್ರದ ಪ್ರಾಚೀನ ಇತಿಹಾಸದ ಬಗ್ಗೆ ಡಾ|| ಉಮಾನಾಥ ಶೆಣೈ ಇವರಿಂದ ವಿಶೇಷ ಉಪನ್ಯಾಸವನ್ನು ಕೂಡ ನಡೆಯಿತು.

LEAVE A REPLY

Please enter your comment!
Please enter your name here