ರಾಮಕುಂಜ ನೇಲಡ್ಕ ಹೊಳೆಗೆ ಬಿದ್ದ ಬೃಹತ್ ಗಾತ್ರದ ಆಲದ ಮರ : ತೋಟಕ್ಕೆ ನುಗ್ಗಿದ ನೀರು

0

ಕೃಷಿಗೆ ಹಾನಿ -ಗ್ರಾ.ಪಂ ನಿಂದ ಪರಿಶೀಲನೆ : ಮರ ತೆರವಿಗೆ ಅರಣ್ಯ ಇಲಾಖೆಗೆ ಮನವಿ : ಸೇತುವೆ ನಿರ್ಮಾಣ ಮಾಡಲು ಆಗ್ರಹ

ಆಲಂಕಾರು: ರಾಮಕುಂಜ ಗ್ರಾಮದ ನೇಲಡ್ಕದ ಹೊಳೆಗೆ ಬೃಹತ್ ಗಾರದ ಆಲದ ಮರ ಬಿದ್ದು ಹೊಳೆಯಲ್ಲಿ ಹರಿಯುತ್ತಿರುವ ನೀರು ತೋಟಕ್ಕೆ ನುಗ್ಗಿ ಕೃಷಿಗೆ ಹಾನಿಯಾದ ಘಟನೆ ರಾಮಕುಂಜ ನೇಲಡ್ಕ ಎಂಬಲ್ಲಿ ನಡೆದಿದ್ದು ನೀರಿನ ರಭಸಕ್ಕೆ ಪಕ್ಕದಲ್ಲಿ ಇದ್ದ ಕಿರು ಸೇತುವೆಗೂ ಹಾನಿಯಾಗಿದೆ.

ಈ ಕಿರು ಸೇತುವೆ ಆಲಂಕಾರು ಗ್ರಾಮಕ್ಕೆ ಮತ್ತು ಕೊಯಿಲ ಗ್ರಾಮದ ಸಬಳೂರಿಗೂ ಸಂಪರ್ಕ ಸೇತುವೆಯಾಗಿದೆ. ಈ ಕಿರು ಸೇತುವೆಯಲ್ಲಿ ಬಹಳ ಕಷ್ಟದಲ್ಲಿ ಕಾರು ಮತ್ತು ಜೀಪುಗಳು ಹೋಗುತ್ತಿದ್ದು ಮಳೆಗಾಲ ಬಂತೆಂದರೆ ಕಿರು ಸೇತುವೆಯ ಬಳಿ ವಾಹನ ನಿಲ್ಲಿಸಿ ಜನ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ಇದೀಗಲೇ 12 ಮನೆಗೆ ಸಂಪರ್ಕವಾಗಿರುವ ಕಿರುಸೇತುವೆ ಅನಾರೋಗ್ಯ ಪೀಡಿತರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಸ್ಥಳಿಯರು ತಮ್ಮ ತಮ್ಮ ಅಳಲನ್ನು ತೋಡಿಗೊಳ್ಳುತ್ತಿದ್ದಾರೆ ಮತ್ತು ಹಲವು ವರ್ಷಗಳಿಂದ ನೇಲಡ್ಕ ಎಂಬಲ್ಲಿ ಸೇತುವೆ ನಿರ್ಮಾಣ ಮಾಡಬೇಕೆಂದು ಜನಪ್ರತಿನಿಧಿಗಳಲ್ಲಿ ಮನವಿ‌ ಮಾಡಿದರು ಏನು ಪ್ರಯೋಜನವಾಗಲಿಲ್ಲ ಎಂದು ಸ್ಥಳಿಯರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ತಕ್ಷಣ ಸಂಬಂಧಪಟ್ಟ ಇಲಾಖೆಯವರು ಸ್ಪಂದನೆ ನೀಡಿ ಸೇತುವೆ ನಿರ್ಮಾಣ ಮಾಡುವಂತೆ ಸ್ಥಳಿಯರು ಆಗ್ರಹಿಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ರಾಮಕುಂಜ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮೋಹನ್ ಕುಮಾರ್. ಜಿ. ಗ್ರಾ.ಪಂ ಉಪಾಧ್ಯಕ್ಷ ಕೇಶವ ಗಾಂಧಿಪೇಟೆ,ಕಿರಿಯ ಪಂಚಾಯತ್ ರಾಜ್ ಇಂಜೀನಿಯರ್ ಹೊಳೆಬಸಪ್ಪ,ಪ್ರಮುಖರಾದ ಸದಾಶಿವ ಶೆಟ್ಟಿ ಮಾರಂಗ ಸೇರಿದಂತೆ ಹಲವು ಮಂದಿ ಭೇಟಿ ನೀಡಿದ್ದಾರೆ.

ರಾಮಕುಂಜ ಗ್ರಾಮದ ನೇಲಡ್ಕ ಎಂಬಲ್ಲಿನ ಹೊಳೆಗೆ ಬೃಹತ್ ಕಾರದ ಆಲದ ಮರ ಬಿದ್ದಿದ್ದು ಹೊಳೆಯಲ್ಲಿ ಹರಿವ ನೀರು ಪಕ್ಕದ ತೋಟದಲ್ಲಿ ಹರಿದಿದ್ದು ಇದರಿಂದ ಸ್ಥಳಿಯರಿಗೆ ತೊಂದರೆಯಾಗಿದೆ.ಹೊಳೆಗೆ ಬಿದ್ದಿರುವ ಬೃಹತ್ ಕಾರದ ಮರವನ್ನು ಶೀಘ್ರ ತೆರವು ಮಾಡುವಂತೆ ಅರಣ್ಯ ಇಲಾಖೆಗೆ ಗ್ರಾ.ಪಂ ವತಿಯಿಂದ ಮನವಿ ಮಾಡುತ್ತೇವೆ. ನೇಲಡ್ಕ ಎಂಬಲ್ಲಿನ ಹೊಳೆಗೆ ಅಡ್ಡಲಾಗಿ ಬೃಹತ್ ಕಾರದ ಮರ ಬಿದ್ದು ನನ್ನ ಅಡಿಕೆ ತೋಟಕ್ಕೆ ಹಾನಿಯಾಗಿದೆ ಮತ್ತು ನಮ್ಮ ದೊಡ್ಡ ಮಳೆಗೆ ನಮ್ಮ ತೋಟದಲ್ಲಿಯೇ ಹೊಳೆಯ ನೀರು ಹರಿಯುತ್ತದೆ ಸಂಬಂಧಪಟ್ಟ ಇಲಾಖೆಯವರು ಶೀಘ್ರ ಮರ ತೆರವು ಮಾಡುವಂತೆ ವಿನಂತಿ ಮಾಡುತ್ತೇವೆ. ಇದರ ನೀರು ಇಲ್ಲಿನ ಕಿರು ಸೇತುವೆಗೆ ಹೊಡೆದು ಮರ ಕಡ್ಡಿಗಳು ಸಿಕ್ಕಿ ಅಪಾಯದ ಹಂತದಲ್ಲಿ ಇದ್ದಂತೆ ಇದೆ. ಈ ಕಿರು ಸೇತುವೆಯಲ್ಲಿ ನಮಗೆ ಯಾವುದೇ ದೊಡ್ಡ ವಾಹನ ಸಂಚಾರಿಸಲು ಆಗುವುದಿಲ್ಲ. ಈ ಕಿರು ಸೇತುವೆ 12 ಮನೆಗಳಿಗೆ ಸಂಪರ್ಕ ಸೇತುವೆಯಾಗಿದ್ದು ಆಲಂಕಾರು ಮತ್ತು ಕೊಯಿಲ ಗ್ರಾಮ ಸಂಪರ್ಕಿಸುವ ಸೇತುವೆ ಆಗಿದೆ. ಕಳೆದ ಹತ್ತು ವರ್ಷಗಳಿಂದ ದೊಡ್ಡ ವಾಹನ ಸಂಚಾರಿಸುವ ಹಾಗೆ ಸೇತುವೆ ನಿರ್ಮಾಣ ಮಾಡಿಕೊಡಬೇಕೆಂದು ನಾವು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದೇವೆ. ಇಷ್ಟರತನಕ ಯಾವುದೇ ಪ್ರಯೋಜನವಾಗಿಲ್ಲ ಅದಷ್ಟು ಬೇಗ ಸೇತುವೆ ನಿರ್ಮಾಣ ಮಾಡಿಕೊಡುವಂತೆ ಜನಪ್ರತಿನಿಧಿಗಳ ಮೂಲಕ ಸರಕಾರಕ್ಕೆ ಮನವಿ ಮಾಡುತ್ತೇವೆ.
ಸುಬ್ಬಣ್ಣ ಶೆಟ್ಟಿ ನೇಲಡ್ಕ

ನೇಲಡ್ಕ ಎಂಬಲ್ಲಿನ ಕಿರು ಸೇತುವೆ ಅಪಾಯದ ಹಂತದಲ್ಲಿದ್ದು ಇದೇ ಕಿರು ಸೇತುವೆಯನ್ನು ನಾವು ಅವಲಂಬಿಸಿದ್ದೇವೆ. ಈ ಕಿರುಸೇತುವೆಯಲ್ಲಿ 108 ಆಂಬ್ಯುಲೆನ್ಸ್ ಹಾಗು ಇನ್ನೀತರ ವಾಹನಗಳು ಸಂಚಾರಿಸಲು ಆಗದೇ ಇಲ್ಲಿನ ಅನೇಕ ಕುಟುಂಬಗಳು ತುಂಬಾ ಕಷ್ಟ ಅನುಭವಿಸುತ್ತಿದ್ದೇವೆ. ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಕಳೆದ ಹತ್ತು ವರ್ಷಗಳಿಂದ ಮನವಿ ಮಾಡಿದರು ಯಾವುದೇ ಪ್ರಯೋಜನ ಆಗಿಲ್ಲ ಸರಕಾರ ಅದಷ್ಟು ಶೀಘ್ರ ಸೇತುವೆ ನಿರ್ಮಾಣ ಮಾಡಿಕೊಡುವಂತೆ ವಿನಂತಿ ಮಾಡುತ್ತೇವೆ.
ಮುತ್ತಪ್ಪ ಗೌಡ ನೇಲಡ್ಕ, ವಿಕಲ ಚೇತನರ ಪುನರ್ವಸತಿ ಕಾರ್ಯಕರ್ತ

LEAVE A REPLY

Please enter your comment!
Please enter your name here