ಹಿರೇಬಂಡಾಡಿ: ಗ್ರಾಮದ ಮುರದಮೇಲು ಎಂಬಲ್ಲಿ ಗೇರು ಮರದ ಹಾಡಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣ ಪತ್ತೆ ಹಚ್ಚಿರುವ ಉಪ್ಪಿನಂಗಡಿ ಪೊಲೀಸರು ಮದ್ಯ ವಶಪಡಿಸಿಕೊಂಡಿರುವ ಘಟನೆ ಜೂ.12ರಂದು ಬೆಳಿಗ್ಗೆ ನಡೆದಿದೆ.
ಮುರದಮೇಲು ಎಂಬಲ್ಲಿ ವಿಮಲ ಎಂಬವರು ಅವರ ಮನೆಯ ಹಿಂಬದಿಯ ಗೇರು ಮರದ ಹಾಡಿಯಲ್ಲಿ ಮದ್ಯ ಸೇವನೆಗೆ ಅನುವು ಮಾಡಿಕೊಟ್ಟಿದ್ದು, ಪೊಲೀಸರು ದಾಳಿ ಮಾಡಿದ ವೇಳೆ ಅಲ್ಲಿ ಒಬ್ಬಾತ ಕುಳಿತು ಮದ್ಯ ಸೇವನೆ ಮಾಡುತ್ತಿದ್ದು ಪೊಲೀಸರು ಬರುತ್ತಿದ್ದಂತೆ ಓಡಿ ತಪ್ಪಿಸಿಕೊಂಡಿದ್ದಾನೆ.
ಸ್ಥಳದಲ್ಲಿದ್ದ 750 ರೂ.ಮೌಲ್ಯದ 90ಎಂ.ಎಲ್ನ ಮೈಸೂರು ಲ್ಯಾನ್ಸರ್ ವಿಸ್ಕಿ ಟೆಟ್ರಾ ಪ್ಯಾಕೆಟ್-15, ಮದ್ಯ ಸೇವನೆಗೆ ಬಳಸಿದ ಸ್ಟೀಲ್ ಗ್ಲಾಸ್-1, ಮದ್ಯ ಸೇವನೆಗೆ ಬಳಸಲು ಉಪಯೋಗಿಸಿದ ಅರ್ಧ ಲೀಟರ್ ನೀರಿನ ಪ್ಲಾಸ್ಟಿಕ್ ಬಾಟ್ಲಿ-1 ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.