ಶುಭಾರಂಭದ ಪ್ರಯುಕ್ತ ಖರೀದಿಗೆ ಉಚಿತವಾಗಿ ಸಿಗಲಿದೆ ಬ್ಲೂ ಟೂಥ್ ನೆಕ್ ಬ್ಯಾಂಡ್…
ಮೊಬೈಲ್ ಸರ್ವೀಸ್ ಮಾಡಿದ್ದಲ್ಲಿ ಉಚಿತವಾಗಿ ಸಿಗುತ್ತದೆ ಗ್ಲಾಸ್ ಆ್ಯಂಡ್ ಕವರ್…
ಪುತ್ತೂರು : ಕಳೆದ 5 ವರುಷಗಳಿಂದ ಪ್ರಕಾಶ್ ಫೂಟ್ ವೇರ್ ಮುಂಭಾಗದಲ್ಲಿ ವ್ಯವಹರಿಸುತ್ತಿದಂತಹ ವಿನಯ ಕಲ್ಲಡ್ಕ ಇವರ ಮಾಲಕತ್ವದ ಮೊಬೈಲ್ ವರ್ಲ್ಡ್ ಇದೀಗ ಶ್ರೀ ಸಾಯಿ ಮೊಬೈಲ್ಸ್ (ಸೇಲ್ಸ್ ಆ್ಯಂಡ್ ಸರ್ವೀಸ್) ಎಂಬ ವಿನೂತನ ಹೆಸರಿನಲ್ಲಿ ಮುಂಭಾಗದ ಕಟ್ಟಡಕ್ಕೆ ಸ್ಥಳಾಂತರಗೊಂಡು ಜೂ.14ರಂದು ಮತ್ತೆ ಶುಭಾರಂಭಗೊಂಡಿತ್ತು.
ಅರ್ಚಕ ಸಂತೋಷ್ ಭಟ್ ಸಂಪ್ಯ ಧಾರ್ಮಿಕ ಕೈಂಕರ್ಯ ನೆರವೇರಿಸಿ, ಮಳಿಗೆಯ ಶ್ರೇಯೋಭಿವೃದ್ದಿಗೆ ಹರಸಿದರು.
ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು ಮಾತನಾಡಿ, ದೇಶದೆಲ್ಲೆಡೆಯೂ ತಂತ್ರಜ್ಞಾನ ವೇಗವಾಗಿ ಮುಂದುವರಿಯುತ್ತಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಅದೇ ರೀತಿ ನಾವು ಬಳಸುತ್ತಿರುವ ಮೊಬೈಲ್ ಫೋನ್ ಕೂಡ ಸೇರಿವೆ. ನೂತನ ಮಳಿಗೆಯಿಂದ ಇನ್ನೂ ಹೆಚ್ಚಿನ ಸೇವೆ, ಸೌಲಭ್ಯ ಸಿಗಲಿ ಮತ್ತು ಸಂಸ್ಥೆಯ ಬೆಳವಣಿಗೆಯೂ ಆಗಲಿ ಎಂದು ಹಾರೈಸಿದರು.
ನ್ಯೂ ಸ್ಟಾರ್ ಲೇಡಿಸ್ ಟೈಲರ್ ಮಾಲಕ ಪಿ ವಸಂತ್, ಕಿರಣ್ ಟೈಲರ್ ಮಾಲಕ ಜಯಂತ್ ಉರ್ಲಾಂಡಿ, ಗುರುದೇವ ಫ್ರೂಟ್ಸ್ ಮಾಲಕ ದೇವದಾಸ್, ಮಧುರಾಜ್, ವಸಂತ್ ಕೋಲ್ಡ್ ಹೌಸ್ ಮಾಲೀಕ ಸತೀಶ್ ಕುಡ್ವ ಸಹಿತ ಹಲವರು ಅತಿಥಿಗಳು ಇದ್ದರು.
ಮಾಲೀಕ ವಿನಯ ಕಲ್ಲಡ್ಕ ಅವರ ತಾಯಿ ರೋಹಿಣಿ ,ಪತ್ನಿ ವನಿತಾ ಹಾಗೂ ಮಕ್ಕಳಾದ ಲತಿಕಾ ಮತ್ತು ವಿನಿತ್ ಅತಿಥಿಗಳನ್ನು ಸ್ವಾಗತಿಸಿದರು.
ಶುಭಾರಂಭದ ಸಲುವಾಗಿ ಮಳಿಗೆಯಲ್ಲಿ ಮೊಬೈಲ್ ಖರೀದಿಗೆ ಉಚಿತವಾಗಿ ಬ್ಲೂ ಟೂಥ್ ನೆಕ್ ಬ್ಯಾಂಡ್ , ಮೊಬೈಲ್ ಸರ್ವೀಸ್ ಗೆ ಉಚಿತ ಗ್ಲಾಸ್ ಮತ್ತು ಮೊಬೈಲ್ ಕವರ್ ಕೂಡ ಸಿಗಲಿದೆಯೆಂದು ಮಾಹಿತಿ ನೀಡಿದ ಮಾಲೀಕರು , ಬಜಾಜ್ ,ಟಿ ವಿ ಎಸ್ ಮತ್ತು ಹೆಚ್ ಡಿ ಬಿ ಫೈನಾನ್ಸ್ ಮೂಲಕ ಇ ಎಂ ಐ ವ್ಯವಸ್ಥೆಯನ್ನು ಸರಳ ,ಸುಲಭ ರೀತಿಯಲ್ಲಿ ಒದಗಿಸಿಕೊಡುತ್ತೇವೆ ಮಾತ್ರವಲ್ಲದೆ ಕ್ಲಪ್ತ ಸಮಯದಲ್ಲಿ ಮೊಬೈಲ್ ರಿಪೇರಿಯನ್ನು ಮಾಡುವುದಾಗಿ ಹೇಳಿ ,ಸಹಕಾರ ಕೋರಿದರು.