ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಹಿಮ್ಮೇಳ ವಿದ್ಯಾರ್ಥಿಗಳ ರಂಗ ಪ್ರವೇಶ ಮತ್ತ ಯಕ್ಷಗಾನ ತಾಳಮದ್ದಳೆ

0

ಶ್ರೀ ಪಂಚಲಿಂಗೇಶ್ವರ ಕಲಾ ಕೇಂದ್ರ ಈಶ್ವರಮಂಗಲ ಇದರ ವತಿಯಿಂದ ಹಿಮ್ಮೇಳ ವಿದ್ಯಾರ್ಥಿಗಳ ರಂಗ ಪ್ರವೇಶ ಕಾರ್ಯಕ್ರಮ ನಡೆಯಿತು. ಯಕ್ಷ ಗುರು ಹಿರಿಯ ಹಿಮ್ಮೇಳ ವಾದಕ  ಮಾಂಬಾಡಿ ಶ್ರೀ ಸುಬ್ರಮಣ್ಯ ಭಟ್ ದೀಪ ಪ್ರಜ್ವಲಿಸಿದರು. ಇವರೊಂದಿಗೆ ಹಿರಿಯ ಅರ್ಥದಾರಿ ಜಬ್ಬಾರ್ ಸಮೋ ಸಂಪಾಜೆ.  ಹಿರಿಯ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿ. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಮಂಜುನಾಥ ರೈ .ಸಾಂತ್ಯ. ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಲಕ್ಷ್ಮೀಶ ರೈ ಮರ್ಕಂಜ.  ಹಿಮ್ಮೇಳ ವಾದನದ ಗುರುಗಳಾದ ಶ್ರೀಧರ್ ವಿಟ್ಲ. ಮತ್ತು ಲವಕುಮಾರ್ ಐಲ. ದೇವರಾಜ ಆಚಾರ್ಯ ಐಕಳ ಉಪಸ್ಥಿತರಿದ್ದು ಹಿಮ್ಮೇಳ ವಿದ್ಯಾರ್ಥಿಗಳ ರಂಗ  ಪ್ರವೇಶ ನಡೆಸಿಕೊಟ್ಟರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಮಂಜುನಾಥ ರೈ ಸಾಂತ್ಯ ಇವರು ಮಾತನಾಡಿ ಈ ಪುಣ್ಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹಿಮ್ಮೇಳ  ವಾದನವನ್ನು ಕಲಿಯುತ್ತಿದ್ದಾರೆ. ಈ ವಿದ್ಯಾರ್ಥಿಗಳು ಉತ್ತಮ ತರಬೇತು ಪಡೆದು ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು. ವಿದ್ಯಾರ್ಥಿಗಳಾದ ಅನ್ವಿತ್  ವೇದಾಂಶ. ಸ್ವರೂಪ್. ಸಹಜ್. ವಿದಿತ್. ಗಣತ್. ಆಶಿಶ್. ಆದಿಶ್ ಎ.ಜೆ . ಗೌರೀಶ್. ತುಷಾರ್. ಸಾಧ್ವಿನ್ .ಸಾತ್ವಿಕ್. ಅಮೃತ್ ಇವರುಗಳು ಯಕ್ಷ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರ ಸಮ್ಮುಖದಲ್ಲಿ ರಂಗ ಪ್ರವೇಶ ಮಾಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರನ್ನು ಸನ್ಮಾನಿಸಲಾಯಿತು.

ಅಭಿನಂದನ ನುಡಿಯನ್ನು ಹಿರಿಯ ಯಕ್ಷಗಾನ ಅರ್ಥದಾರಿ ಜಬ್ಬಾರ್  ಸಮೊ ಸಂಪಾಜೆ ಹೇಳಿದರು. ಸನ್ಮಾನ ಪತ್ರವನ್ನು ಶಿಕ್ಷಕರಾದ ಜನಾರ್ಧನ ಅಲ್ಚಾರ್ ವಾಚಿಸಿದರು. ಹಿಮ್ಮೇಳದ  ಗುರುಗಳಾದ ಲವಕುಮಾರ್ ಐಲಾ. ಮತ್ತು ಶ್ರೀಧರ ವಿಟ್ಲ ಗುರುವಂದನ ಕಾರ್ಯಕ್ರಮ ನಡೆಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ  ಮಾಂಬಾಡಿ ಶ್ರೀ ಸುಬ್ರಹ್ಮಣ್ಯ ಭಟ್ ಮಾತನಾಡಿ ಮಕ್ಕಳ ಯಕ್ಷಗಾನ ಭವಿಷ್ಯಕ್ಕೆ ಶುಭ ಹಾರೈಸಿದರು. ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿ ಮಾತನಾಡಿ ಮಾಂಬಾಡಿ ಗುರುಗಳ ಹಿಮ್ಮೇಳ  ಶಿಕ್ಷಣದ ಬಗ್ಗೆ ಮಾತನಾಡಿ 3000ಕ್ಕೂ ಅಧಿಕ ಶಿಷ್ಯರು ಇವರಿಂದ ಹಿಮ್ಮೇಳವಾದನವನ್ನು ಕಲಿತಿದ್ದಾರೆ. ಗುರುಗಳ ಶಿಷ್ಯರು ಇಂದು ಈಶ್ವರಮಂಗಲದಲ್ಲಿ ಈ ಕಲಾ ಕೇಂದ್ರದ ಮೂಲಕ  ಹೊಸ ಹಿಮ್ಮೇಳ ವಾದಕರನ್ನು ತರಬೇತು ಗೊಳಿಸಿರುತ್ತಾರೆ  ಎಂದರು. ವೇದಿಕೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಸದಾಶಿವ ರೈ ನಡುಬೈಲು ಉಪಸ್ಥಿತರಿದ್ದು ಶುಭ ಹಾರೈಸಿದರು.

ಸಭಾಧ್ಯಕ್ಷತೆ ವಹಿಸಿದ  ಶ್ರಿ ಕ್ಷೇತ್ರ ಹನುಮಗಿರಿ ಇಲ್ಲಿಯ ಧರ್ಮದರ್ಶಿಗಳಾದ ಶಿವರಾಮ ಪಿ ಈಶ್ವರಮಂಗಲ ಇವರು ಮಾತನಾಡಿ ಇನ್ನೂ ಕಠಿಣ ಅಭ್ಯಾಸ ಮಾಡಿದರೆ ಕಲೆಯು ನಮ್ಮನ್ನು ಒಲಿಯುದು. ಸತತ ಅಭ್ಯಾಸ ಮಾಡಿ ಎಂದು ಶುಭ ಹಾರೈಸಿದರು. ಶ್ರೀ ಪಂಚಲಿಂಗೇಶ್ವರ ಕಲಾ ಕೇಂದ್ರದ ಸದಸ್ಯರಾದ ವಿದ್ಯಾ ಪ್ರಭಾ ಮಂಜುನಾಥ ರೈ ಕಲ್ಲಾಜೆ. ಶ್ರೀಮತಿ ಅನಿತಾ ಜನಾರ್ಧನ ಆಲ್ಚಾರ್. ಶ್ರೀಮತಿ ಚಿತ್ರಾವತಿ ಉಮೇಶ್ ವೈ .ಏತಡ್ಕ. ಶ್ರೀಮತಿ ಗಾಯತ್ರಿ ಚಂದ್ರಶೇಖರ ಗೌಡ ಈಶ್ವರ ಮಂಗಲ. ಶ್ರೀಮತಿ ಮಹಿತಾ ಸುರೇಶ್ ರೈ ನಡುಬೈಲ್. ಶ್ರೀಮತಿ ಸವಿತಾ ಜಗನ್ಮೋಹನ್ ಶೆಟ್ಟಿ ಕುತ್ತ್ಯಾಳ. ಶ್ರೀಮತಿ ಪ್ರೇಮಲತಾ ಮೋಹನ್ ಅಣಿಲೆ. ಶ್ರೀಮತಿ ಲೋಕೇಶ್ವರಿ ಕೇಶವ ಕೋರಿಗದ್ದೆ. ಶ್ರೀಮತಿ ರಾಜೀವಿ ಭಂಡಾರಿ ಕಲ್ಲಾಜೆ. ಶ್ರೀಮತಿ ಗೀತಾ ಬಾಲಕೃಷ್ಣ ಎಂ  ಅಣಿಲೆ. ಶ್ರೀಮತಿ ಜಯಲತಾ ದೇವಿಪ್ರಕಾಶ್ ಶೆಟ್ಟಿ  ಕುತ್ತ್ಯಾಳ. ಶ್ರೀಮತಿ ಮಂಜುಳಾ ರಾಘವೇಂದ್ರ ಆಚಾರ್ಯ. ಈಶ್ವರ ಮಂಗಲ. ಶ್ರೀಮತಿ ಶಾರದಾ ಮಾಧವ ಆಚಾರ್ಯ ನಡುಬೈಲು. ಇವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಸಂಯೋಜಕ ಪ್ರವೀಣ್ ಕುಮಾರ್ ಕರ್ನೂರು ಇವರನ್ನು ಗೌರವಿಸಲಾಯಿತು.

ಶ್ರೀದೇವಿ ಪ್ರಕಾಶ್ ಶೆಟ್ಟಿ ಕುತ್ತ್ಯಾಳ ಸ್ವಾಗತಿಸಿದರು. ಶಿಕ್ಷಕ  ರಮೇಶ್ ಶಿರ್ಲಾಲ್ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಮಹಿತಾ ಸುರೇಶ್ ರೈ ವಂದಿಸಿದರು. ನಂತರ  ನಡೆದ ಶರಸೇತು ಬಂಧನ  ತಾಳಮದ್ದಲೆಯನ್ನು ಹಿರಿಯ ಅರ್ಥದಾರಿಗಳಾದ ಜಬ್ಬಾರ್ ಸಮೂ ಸಂಪಾಜೆ. ಜಯಪ್ರಕಾಶ್ ಶೆಟ್ಟಿ ಪೆರ್ಮುದೆ. ಪ್ರಸಾದ ಸವಣೂರು. ಭಾಗವತರಾಗಿ ದೇವರಾಜ ಆಚಾರ್ಯ ಐಕಳ. ಭರತ್ ಶೆಟ್ಟಿ ಸಿದ್ದಕಟ್ಟೆ. ಚೆಂಡೆ ಮತ್ತು ಮದ್ದಳೆ ಯಲ್ಲಿ ಶ್ರೀಧರ ವಿಟ್ಲ ಮತ್ತು ಲವ ಕುಮಾರ್. ಐಲಾ ಮತ್ತು ಚಕ್ರತಾಳದಲ್ಲಿ ನಾಗೇಶ ಆಚಾರ್ಯ ಸಹಕರಿಸಿದರು..

LEAVE A REPLY

Please enter your comment!
Please enter your name here