ಪುತ್ತೂರು: 34 ನೆಕ್ಕಿಲಾಡಿ ಸರಕಾರಿ ಹಿ.ಪ್ರಾ.ಶಾಲೆಯ ಎಲ್ಕೆಜಿ ಮತ್ತು ಯುಕೆಜಿ ತರಗತಿಗೆ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಪ್ರಾಯೋಜಕರಾದ ಕ್ರಿಸ್ಟೊಫರ್ ಸಂಸ್ಥೆಯ ಮಾಲಕರಾದ ವಲ್ಲೇರಿಯನ್ ಡಯಾಸ್, ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ನವೀನ್ ಬ್ರ್ಯಾಗ್ಸ್, ನಿಯೋಜಿತ ಅಧ್ಯಕ್ಷ ಜಾನ್ ಕೆನ್ಯೂಟ್, ನಿಯೋಜಿತ ಕಾರ್ಯದರ್ಶಿ ಶ್ರೀಕಾಂತ್ ಪಾಟೀಲ್, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಉಲ್ಲಾಸ್ ಕೋಟ್ಯಾನ್, ಕೆಜಿ ಸಮಿತಿಯ ಉಪಾಧ್ಯಕ್ಷರೂ, ೩೪ ನೆಕ್ಕಿಲಾಡಿ ಗ್ರಾ.ಪಂ.ಅಧ್ಯಕ್ಷರೂ ಆದ ಸುಜಾತ ಆರ್ ರೈ., ಉಪಾಧ್ಯಕ್ಷ ಹರೀಶ್ ಡಿ., ಪುತ್ತೂರು ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯರು, ಕೆಜಿ ಸಮಿತಿಯ ಕೋಶಾಧಿಕಾರಿಯೂ ಆದ ಅಬ್ದುಲ್ ರಹಿಮಾನ್ ಯುನಿಕ್, ಕೆಜಿ ಸಮಿತಿಯ ಉಪಾಧ್ಯಕ್ಷೆ ಅನಿ ಮಿನೆಜಸ್, ಎಸ್ಡಿಎಂಸಿ ಅಧ್ಯಕ್ಷ ರಾಜೀವ ನಾಯ್ಕರವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
ಈ ವೇಳೆ ರೋಟರಿ ಕ್ಲಬ್ ಉಪ್ಪಿನಂಗಡಿ ಪ್ರಾಯೋಜಕತ್ವದಲ್ಲಿ ಕೆಜಿ ತರಗತಿ ಶಿಕ್ಷಕಿಗೆ ಒಂದು ವರ್ಷದ ಗೌರವ ಧನ ಹಾಗೂ ಮಕ್ಕಳಿಗೆ ಜಾರುಬಂಡಿ, 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ವತಿಯಿಂದ ನೆಲಕ್ಕೆ ಟೈಲ್ಸ್, ಕಿಟಕಿಗಳಿಗೆ ಅಲ್ಯುಮಿನಿಯಂ ಬಾಗಿಲುಗಳು, ದಾರಂದ ಮತ್ತು ಬಾಗಿಲು, ಹಿರಿಯ ವಿದ್ಯಾರ್ಥಿ ಸಂಘದಿಂದ ಗೋಡೆಗೆ ಪೈಂಟಿಂಗ್, ಪಡಿ ಸಂಸ್ಥೆ ಮಂಗಳೂರು ಇವರ ವತಿಯಿಂದ ಗೋಡೆಯಲ್ಲಿ ಅಕ್ಷರ ಬರಹ ಹಾಗೂ ಚಿತ್ರದ ಬರಹ, ಶಾಲಾ ಶಿಕ್ಷಕರ ವತಿಯಿಂದ ಕೆಜಿ ಮಕ್ಕಳಿಗೆ ಸಮವಸ್ತ್ರ, ಅನಿಮಿನೆಜೆಸ್ರವರ ವತಿಯಿಂದ ಛತ್ರಿ, ಉಲ್ಲಾಸ್ ಕೊಟ್ಯಾನ್ರವರ ವತಿಯಿಂದ ನೋಟ್ ಬುಕ್, ಗೌರವ ಶಿಕ್ಷಕಿ ಪೂರ್ಣಿಮಾರವರ ವತಿಯಿಂದ ಚಾಪೆ, ಹಿರಿಯ ಶಿಕ್ಷಕಿ ಪದ್ಮರವರ ವತಿಯಿಂದ ಮಕ್ಕಳ ಆಟಿಕೆ ಸಾಮಾನು, ಶಾಲಾ ಎಸ್ಡಿಎಂಸಿ ವತಿಯಿಂದ 30 ಊಟದ ಬಟ್ಟಲುಗಳನ್ನು ಕೊಡುಗೆಯಾಗಿ ನೀಡಲಾಯಿತು.
ಮುಖ್ಯಶಿಕ್ಷಕಿ ಕಾವೇರಿ ಸ್ವಾಗತಿಸಿದರು. ಶಿಕ್ಷಕಿ ಪದ್ಮ ವಂದಿಸಿದರು. ಶಿಕ್ಷಕಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಅಶ್ವಿನಿ, ಉಷಾಕುಮಾರಿ, ಕವಿತಾ, ಕೆಜಿ ತರಗತಿ ಶಿಕ್ಷಕಿ ಶಾಲಿನಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.