ಕಾಣಿಯೂರು: ಕೊಪ್ಪ ಕಿ. ಪ್ರಾ. ಶಾಲೆಯಲ್ಲಿ 2025-26 ನೇ ಸಾಲಿನ ಶಾಲಾ ವಿದ್ಯಾರ್ಥಿ ಸರಕಾರ ರಚಣೆಯಾಯಿತು.ಮುಖ್ಯ ಮಂತ್ರಿಯಾಗಿ ಸ್ವಸ್ತಿಕ್, ಉಪಮುಖ್ಯಮಂತ್ರಿಯಾಗಿ ಆಕಾಶ್ ಆಯ್ಕೆಯಾದರು.
ಉಳಿದಂತೆ ಗೃಹಮಂತ್ರಿಯಾಗಿ ಆಶಿಕಾ, ಶಿಕ್ಷಣಮಂತ್ರಿಯಾಗಿ ಸುಹಾನಾ, ಅರೋಗ್ಯಮಂತ್ರಿಯಾಗಿ ಸಾತ್ವಿಕ್, ಕ್ರೀಡಾಮಂತ್ರಿಯಾಗಿ ಶಂಕರ, ನೀರಾವರಿ ಮಂತ್ರಿಯಾಗಿ ಧವನ್, ಗ್ರಂಥಾಲಯ ಮಂತ್ರಿಯಾಗಿ ತನುಶ್ರೀ ವಿ ಎಸ್, ಸಾಹಿತ್ಯ ಮಂತ್ರಿಯಾಗಿ ಘನಶ್ಯಾಮ, ಸಾಂಸ್ಕೃತಿಕ ಮಂತ್ರಿಯಾಗಿ ತನುಶ್ರೀ ಎಸ್ ಅವರನ್ನು ಆಯ್ಕೆ ಮಾಡಲಾಯಿತು.
ಚುನಾವಣಾ ಅಧಿಕಾರಿಯಾಗಿ ಮುಖ್ಯಗುರು ನಾರಾಯಣ.ಡಿ. ಹಾಗೂ ಚುನಾವಣಾ ಪ್ರಕ್ರಿಯೆಯನ್ನು ಸುರೇಶ ನಾಯ್ಕ ಮತ್ತು ಕು.ಹವ್ಯ ನಡೆಸಿಕೊಟ್ಟರು. ನೂತನ ಶಾಲಾ ಮಂತ್ರಿ ಮಂಡಲಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮುಖ್ಯಗುರು ನಾರಾಯಣ. ಡಿ. ರವರು ಪ್ರಮಾಣವಚನ ಬೋಧಿಸಿದರು